ಉಡುಪಿ: ಎ.14ರಂದು ಅಂಬೇಡ್ಕರ್ ಬದುಕು-ಹೋರಾಟ ವಿಶೇಷ ಕಾರ್ಯಕ್ರಮ
Update: 2022-04-10 14:41 GMT
ಉಡುಪಿ, ಎ.10: ಕರ್ನಾಟಕ ದಲಿತ ಸಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಹಾಗೂ ಉಡುಪಿ ಸಹಬಾಳ್ವೆ ಸಮಿತಿ ವತಿಯಿಂದ ಭಾರತ ರತ್ನ ಅಂಬೇಡ್ಕರ್ರ 131ನೇ ಜನ್ಮದಿನದ ಪ್ರಯುಕ್ತ ವಿಶೇಷ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎ.14ರಂದು ಬೆಳಗ್ಗೆ 10ಗಂಟೆಗೆ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಂಬೇಡ್ಕರ್ ಬದುಕು ಮತ್ತು ಹೋರಾಟ ಕುರಿತು ಮುಖ್ಯ ಭಾಷಣ ಮಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.