ನಾಪತ್ತೆ

Update: 2022-04-19 15:27 GMT

ಪುತ್ತೂರು: ನಗರದ ಹೊರವಲಯದ ಕೇಪುಳು ತಾರಿಗುಡ್ಡೆ ನಿವಾಸಿ ಯೂಸುಫ್(72) ಎಂಬವರು ನಾಪತ್ತೆಯಾಗಿ ರುವ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಯೂಸುಫ್ ಅವರು ಅಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥರಾಗಿದ್ದು, ತನ್ನ ಸಹೋದರ ಇಸ್ಮಾಯಿಲ್ ಸಾಲ್ಮರ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಆಗಾಗ ಮನೆಯಿಂದ ಪೇಟೆಗೆ ಹೋಗುವುದಾಗಿ ತಿಳಿಸಿ ಹೋದಲ್ಲಿ ಸಂಜೆ ಅಥವಾ ಮರುದಿನ ಮನೆಗೆ ಆಗಮಿಸುತ್ತಿದ್ದರು. ಮಾ.31ರಂದು ಅವರು ಮನೆಯಿಂದ ಪೇಟೆಗೆಂದು ಹೋದವರು ಹಿಂದಿರುಗಿ ಬಂದಿಲ್ಲ ಎಂದು ಇಸ್ಮಾಯಿಲ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಅವರ ಪತ್ತೆಯಾದಲ್ಲಿ ಇಸ್ಮಾಯಿಲ್ ಅವರ ಮೊಬೈಲ್ ಸಂಖ್ಯೆ 9164505755 ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News