೨4ಕ್ಕೆ ನಾರಾಯಣಗುರು ವಿಚಾರ ವೇದಿಕೆ ಉದ್ಘಾಟನೆ
Update: 2022-04-22 22:21 IST
ಉಡುಪಿ : ಬೆಂಗಳೂರಿನ ಶ್ರೀನಾರಾಯಣಗುರು ವಿಚಾರವೇದಿಕೆಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಘಟಕ ಹಾಗೂ ತಾಲೂಕು ಗಟಕಗಳ ಉದ್ಘಾಟನೆ ಎ.24ರ ರವಿವಾರ ಸಂಜೆ ನಾಲ್ಕು ಗಂಟೆಗೆ ಬನ್ನಂಜೆಯಲ್ಲಿರುವ ಬಿಲ್ಲವರ ಸೇವಾ ಸಂಘದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀನಾರಾಯಣಗುರು ವಿಚಾರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.