ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಧೋನಿಗೆ ವಾಪಸ್ ಹಸ್ತಾಂತರಿಸಿದ ರವೀಂದ್ರ ಜಡೇಜ

Update: 2022-04-30 14:31 GMT

 ಮುಂಬೈ, ಎ.30: ಆಲ್‌ರೌಂಡರ್ ರವೀಂದ್ರ ಜಡೇಜ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿಗೆ ವಾಪಸ್ ಹಸ್ತಾಂತರಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮೂಲಕ ಅಧಿಕೃತವಾಗಿ ಪ್ರಕಟಿಸಿದೆೆ.

ಜಡೇಜ ಸಿಎಸ್‌ಕೆ ನಾಯಕತ್ವವನ್ನು ಎಂ.ಎಸ್. ಧೋನಿಗೆ ವಾಪಸ್ ಹಸ್ತಾಂತರಿಸಿದ್ದಾರೆ. ತನ್ನ ಆಟದತ್ತ ಹೆಚ್ಚು ಗಮನ ನೀಡಲು ಜಡೇಜ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಸಿಎಸ್‌ಕೆಯನ್ನು ನಾಯಕನಾಗಿ ಮುನ್ನಡೆಸುವಂತೆ ಧೋನಿಯವರನ್ನು ವಿನಂತಿಸಿದ್ದಾರೆ. ಹೆಚ್ಚಿನ ಹಿತಾಸಕ್ತಿಯ ದೃಷ್ಟಿಯಿಂದ ಸಿಎಸ್‌ಕೆಯನ್ನು ಮುನ್ನಡೆಸಲು ಧೋನಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಜಡೇಜಗೆ ಪಂದ್ಯದತ್ತ ಗಮನ ನೀಡಲು ಅವಕಾಶ ನೀಡಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಟ್ವೀಟಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News