ಶಿರ್ವ: ಉದ್ಯೋಗ ಸಿಗದ ಚಿಂತೆಯಲ್ಲಿ ಎಂಬಿಎ ಪದವೀಧರೆ ಆತ್ಮಹತ್ಯೆ

Update: 2022-05-12 08:10 GMT
ಸಹನಾ

ಶಿರ್ವ : ಎಂಬಿಎ ವಿದ್ಯಾಭ್ಯಾಸ ಮುಗಿಸಿದರೂ ಉದ್ಯೋಗ ಸಿಗದ ಚಿಂತೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಕಟ್ಟಿಂಗೇರಿ ಗ್ರಾಮದ ಎಡ್ಮೇರು ಎಂಬಲ್ಲಿ ನಡೆದಿದೆ.

ಮೃತರನ್ನು ಸಹನಾ (23) ಎಂದು ಗುರುತಿಸಲಾಗಿದೆ.

ಇವರು ಒಂದೂವರೆ ವರ್ಷದ ಹಿಂದೆ ಮಂಗಳೂರಿನ ಕಾಲೇಜಿನಲ್ಲಿ ಎಂಬಿಎ ವಿದ್ಯಾಬ್ಯಾಸ ಮುಗಿಸಿದ್ದು, ಆಕೆಗೆ ಈವರೆಗೆ ಯಾವುದೇ ಉದ್ಯೋಗ ದೊರಕಿಲ್ಲ ಎನ್ನಲಾಗಿದೆ.

ಇದೇ ಚಿಂತೆಯಲ್ಲಿ ಅವರು ಎ.30ರಂದು ಎಡ್ಮೇರುವಿನಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಮೇ 1ರಂದು ಬೆಳಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು, ಮೇ 9ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News