ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2022-05-10 16:12 GMT

ಕೋಟ : ವೈಯಕ್ತಿಕ ಕಾರಣದಿಂದ ಮನನೊಂದ ಮಣೂರು ಗ್ರಾಮದ ಕಾಸನಗುಂದು ನಿವಾಸಿ ರಾಮದೇವ ಕಾರಂತ (54) ಎಂಬವರು ಮೇ 8ರಂದು ರಾತ್ರಿ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಮಾಸೆಬೈಲು: ವಿಪರೀತ ಕುಡಿತದ ಚಟದಿಂದ ಮನನೊಂದ ಮಚ್ಚಟ್ಟು ಗ್ರಾಮದ ಇರಿಜೆಡ್ಡು ನಿವಾಸಿ ಮಹಾಬಲ ಆಚಾರಿ ಎಂಬವರ ಮಗ ರವೀಂದ್ರ ಆಚಾರಿ (38) ಎಂಬವರು ಮೇ 9ರಂದು ಮಧ್ಯಾಹ್ನ ಮನೆ ಸಮೀಪದ ತೋಟ ದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News