​ಪ್ರತ್ಯೇಕ ಪ್ರಕರಣ: ಎರಡು ಬೈಕ್ ಕಳವು

Update: 2022-05-18 16:44 GMT

ಉಡುಪಿ : ಬನ್ನಂಜೆ ಎಸ್‌ಬಿಐ ಎಟಿಎಂ ಎದುರು ಮೇ 17ರಂದು ಸಂಜೆ ವೇಳೆ ನಿಲ್ಲಿಸಿ ಹೋದ ರಾಜೇಶ್ ರಾವ್ ಎಂಬವರ 60 ಸಾವಿರ ರೂ. ಮೌಲ್ಯದ ಕೆಎ೨೦ ಇವಿ ೨೩೫೭ ನಂಬರಿನ ಹೊಂಡಾ ಡಿಯೋ ಸ್ಕೂಟರ್ ಕಳವಾಗಿರುವ ಬಗ್ಗೆ ವರದಿಯಾಗಿದೆ.

ಅದೇ ರೀತಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಯಾದಗಿರಿ ಮೂಲದ ಪರಶುರಾಮ್ ಸಾಲಿಯಾರ್ ಎಂಬವರ ಕೆಎ೩೩ ಆರ್‌೨೫೮೪ ನಂಬರಿನ ೩೫ ಸಾವಿರ ರೂ. ಮೌಲ್ಯದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ರೊ ಬೈಕ್ ಕಳವಾಗಿಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News