ಮೇ 27ರಂದು ಎಸ್ಡಿಪಿಐಯಿಂದ ಜನಾಧಿಕಾರ ಸಮಾವೇಶ: ಅಥಾವುಲ್ಲಾ ಜೋಕಟ್ಟೆ

Update: 2022-05-21 12:47 GMT

ಮಂಗಳೂರು : ಎಸ್ಡಿಪಿಐ ವತಿಯಿಂದ ಬೃಹತ್ ಜನಾಧಿಕಾರ ಸಮಾವೇಶ ಮೇ 27ರಂದು ಅಪರಾಹ್ನ 2.30ಕ್ಕೆ ಕಣ್ಣೂರು ಮೈದಾನದಲ್ಲಿ ನಡೆಯಲಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದ ಬೆಂಗಳೂರು, ಧಾರವಾಡ, ಗುಲ್ಬರ್ಗ, ಮೈಸೂರು ಸೇರಿ ಒಟ್ಟು 5 ಕಡೆ ಈ ರೀತಿಯ ಸಮಾವೇಶ ನಡೆಯಲಿದೆ. ಈ ಸಭೆಯ ಪೂರ್ವ ಭಾವಿಯಾಗಿ ವಿವಿಧ ಕಡೆ ಸಿದ್ಧತಾ ಸಭೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ದ್ವೇಷದ ,ರಾಜಕೀಯದಲ್ಲಿ ಹಗರಣಗಳಲ್ಲಿ ಮುಳುಗಿದೆ. ರಾಜ್ಯದ ಜನತೆ ಹಸಿವು ಮುಕ್ತ, ಭಯ ಮುಕ್ತ ಆಡಳಿತ ಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದ್ವೇಷದ, ಭೀತಿಯ ಅರಾಜಕತೆಯ ರಾಜಕಾರಣವನ್ನು ಕೊನೆಗಾಣಿಸಲು ಎಸ್ಡಿಪಿಐ ಪರ್ಯಾಯ ರಾಜಕೀಯ ಶಕ್ತಿ ರಾಜ್ಯದಲ್ಲಿ ಜನ ಜಾಗೃತಿ ಮೂಡಿಸಲು ಈ ಸಮಾವೇಶ ಹಮ್ಮಿಕೊಂಡಿರುವುದಾಗಿ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ, ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News