ಉತ್ತರಪ್ರದೇಶ: ಮದುವೆ ಮುಗಿಸಿ ಹಿಂದಿರುಗುತ್ತಿದ್ದವರ ಕಾರು ಟ್ರಕ್‌ಗೆ ಡಿಕ್ಕಿ, 8 ಮಂದಿ ಸಾವು, 3 ಜನರಿಗೆ ಗಾಯ

Update: 2022-05-22 18:26 GMT

ಸಿದ್ಧಾರ್ಥನಗರ (ಉತ್ತರಪ್ರದೇಶ), ಮೇ 22: ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತಂಡವೊಂದು ಪ್ರಯಾಣಿಸುತ್ತಿದ್ದ ಎಸ್ಯುವಿ ವಾಹನ ಇಲ್ಲಿ ನಿಂತಿದ್ದ  ಟ್ರಕ್‌ಗೆ ಢಿಕ್ಕಿಯಾದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಜೋಗಿಯಾ ಉದಯಪುರ ಪ್ರದೇಶದ ಕಾಟ್ಯಾ ಗ್ರಾಮದ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ. 11 ಮಂದಿಯನ್ನು ಕರೆದೊಯ್ಯುತ್ತಿತ್ತು ಎಸ್ಯುವಿ ವಾಹನ ನಿಂತಿದ್ದ  ಟ್ರಕ್‌ಗೆ ಢಿಕ್ಕಿಯಾಗಿತ್ತು.

ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡ ಇತರರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು ಸಚಿನ್ ಪಾಲ್ (16), ಮುಖೇಶ್ ಪಾಲ್ (35), ಲಾಲಾರಾಮ್ ಪಾಸ್ವಾನ್ (26), ಶಿವಸಾಗರ್ (18), ರವಿ ಪಾಸ್ವಾನ್ (19) ಪಿಂಟು ಗುಪ್ತಾ (25) ಹಾಗೂ ವಾಹನದ ಚಾಲಕ ಗೌರವ್ ವೌರ್ಯ (22) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News