ಗಾಂಜಾ ಸೇವನೆ: ಐವರು ಪೊಲೀಸ್ ವಶಕ್ಕೆ

Update: 2022-05-25 16:47 GMT

ಶಿರ್ವ : ಗಾಂಜಾ ಸೇವನೆಗೆ ಸಂಬಂಧಿಸಿ ಶಿರ್ವ ಮಸೀದಿ ಬಳಿಯ ಬಸ್ ನಿಲ್ದಾಣ ಸಮೀಪ ಬೆಳಪು ಜವನರಕಟ್ಟೆಯ ಕಲಂದರ್(೩೫) ಹಾಗೂ ಮಲ್ಲಾರು ಪಕೀರ್ಣಕಟ್ಟೆಯ ಅಕ್ಬರ್(೩೩) ಎಂಬವರನ್ನು ಮೇ ೨೪ರಂದು ಮತ್ತು ಬೆಳಪು ವಿನಯನಗರದ ಮೊಹಮ್ಮದ್ ನಿಸ್ಸಾರ್(೩೪) ಎಂಬಾತನನ್ನು ಮೇ ೨೫ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮೇ ೨೫ರಂದು ಮಣಿಪಾಲ ವಿದ್ಯಾರತ್ನ ನಗರದಲ್ಲಿ ಬಾಗಲಕೋಟೆ ಮೂಲದ ಸಚಿನ್ ಯಮುನಪ್ಪ ಹಾಲನ್ನವರ್(೨೦) ಹಾಗೂ ಕುರ್ಕಾಲು ಸುಭಾಷ್ ನಗರದ ಪ್ರೇಮನಾಥ್ ರೇವು (೨೧) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News