​ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2022-05-27 15:30 GMT

ಕುಂದಾಪುರ :  ವಿಪರೀತ ಶರಾಬು ಕುಡಿಯುವ ಚಟ ಹಾಗೂ ಸಾಲ ತೀರಿಸಲಾಗದ ಚಿಂತೆಯಲ್ಲಿ ಮನನೊಂದ ಆಲೂರು ಗ್ರಾಮದ ತಾರಿಬೇರು ನಿವಾಸಿ ಚಂದ್ರ (೫೫) ಎಂಬವವರು ಮೇ ೨೪ರ ಮಧ್ಯಾಹ್ನ ೧೨:೩೦ರಿಂದ ೨೬ರ ಬೆಳಗ್ಗೆ ೧೦:೩೫ರ ಮಧ್ಯಾವಧಿಯಲ್ಲಿ ಕುಂದಾಪುರ ಸಂಗಂ ಬಳಿಯ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಅನಾರೋಗ್ಯ ಮತ್ತು ಮದ್ಯಪಾನದ ಅಭ್ಯಾಸದ ಚಟದಿಂದ ಮನನೊಂದ ನೀಲಯ್ಯ ಮೂಲ್ಯ ಎಂಬವರು ಮೇ ೨೬ರಂದು ಸಂಜೆ ಮಾಳ ಗ್ರಾಮದ ಮಲ್ಲಾರು ಎಂಬಲ್ಲಿ ಮರದ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News