ಹೊಳೆಗೆ ಬಿದ್ದು ಕೃಷಿಕ ಮೃತ್ಯು

Update: 2022-05-27 15:31 GMT

ಶಂಕರನಾರಾಯಣ : ತಲ್ಲೂರು ಮಕ್ಕಿ ಹಾಲಾಡಿ ಹೊಳೆಗೆ ಅಕಸ್ಮಿಕ ವಾಗಿ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ತಲ್ಲೂರು ಮಕ್ಕಿ ನಿವಾಸಿ ಬಾಬು ನಾಯ್ಕ(೫೫) ಎಂದು ಗುರುತಿಸಲಾಗಿದೆ. ಇವರು ಮೇ ೨೬ರಂದು ಮಧ್ಯಾಹ್ನ ತೋಟದ ಅಡಿಕೆ ಸಸಿಗಳಿಗೆ ನೀರು ಬಿಡಲು ಹಾಲಾಡಿ ಹೊಳೆಯಲ್ಲಿರುವ ಪುಟ್‌ಬಾಲ್ ಪರಿ ಶೀಲಿಸಲು ನೀರಿಗೆ ಇಳಿದರು. ಈ ವೇಳೆ ಅವರು ಅಕಸ್ಮಿಕವಾಗಿ ಕಾಲು ಜಾರಿ ಹೊಳೆ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು.

ಇವರ ಮೃತದೇಹವು ಮೇ ೨೭ರಂದು ಬೆಳಗ್ಗೆ ೯.೩೦ಕ್ಕೆ ನದಿಯ ಇನ್ನೊಂದು ದಡದ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News