ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2022-07-26 05:33 GMT

ಕಾರ್ಕಳ : ಮನೆಯಿಂದ ಮೇ ೪ರಂದು ಹೋದ ನಲ್ಲೂರು ಗ್ರಾಮದ ನೆಲ್ಲದಬೆಟ್ಟು ನಿವಾಸಿ ಪ್ರವೀಣ(೨೬) ಎಂಬ ವರು ಮೇ೧೦ರಂದು ಆತನ ಅಕ್ಕನ ಮೊಬೈಲಿಗೆ ವಾಪಾಸು ಮನೆಗೆ ಬರುವುದಾಗಿ ಮೆಸೇಜ್ ಮಾಡಿದರೂ ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಕರಂಬಳ್ಳಿ ಜನತಾ ಕಾಲೊನಿಯ ಮಾಧವ ದೇವಾಡಿಗ(೬೭) ಎಂಬವರು ಮೇ ೨೩ರಂದು ಮನೆ ಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News