ಗಾಂಜಾ ಸೇವನೆ: ನಾಲ್ವರು ವಶಕ್ಕೆ

Update: 2022-05-29 15:21 GMT

ಪಡುಬಿದ್ರಿ : ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇ 26ರಂದು  ನಂದಿಕೂರು ಗ್ರಾಮದ ಅಡ್ವೆ ಬಳಿ ಶಾಹಿದ್, ಬಿಲಾಲ್, ಉಚ್ಚಿಲ ಪೊಲ್ಯ ಬಳಿ ಅಬ್ದುಲ್ಲಾ  ಹಾಗೂ ಮೇ 27ರಂದು ಕಂಚಿನಡ್ಕ  ಸುಬ್ಬಯ್ಯನ ಕಾಡು ಎಂಬಲ್ಲಿ  ಅನ್ವರ್ ಎಂಬವರನ್ನು ವಶಕ್ಕೆ ಪಡೆದು, ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಎದುರು ಹಾಜರುಪಡಿಸಿ ಪರೀಕ್ಷಿಸಲಾಗಿತ್ತು. ಮೇ ೨೯ರಂದು ಬಂದ ವರದಿಯಲ್ಲಿ ಇವರೆಲ್ಲ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News