×
Ad

ಮುಂಬೈ: ನೈಜೀರಿಯಾ ನಾಗರಿಕನಿಂದ ದಾರಿಹೋಕರಿಗೆ ಚೂರಿ‌ ಇರಿತ: 8 ಮಂದಿಗೆ ಗಾಯ, ಓರ್ವ ಗಂಭೀರ

Update: 2022-06-02 14:35 IST
Photo:PTI

ಮುಂಬೈ: ದಕ್ಷಿಣ ಮುಂಬೈನ ಚರ್ಚ್‌ಗೇಟ್ ಪ್ರದೇಶದ ಬಳಿ ಬುಧವಾರ  ನೈಜೀರಿಯಾದ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಚಾಕುವಿನಿಂದ ದಾಳಿ ಮಾಡಿದ ಪರಿಣಾಮ ಕನಿಷ್ಠ 8 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪಾರ್ಸಿ ವೆಲ್ ಬಳಿಯ ಟಾಟಾ ಗಾರ್ಡನ್‌ನಲ್ಲಿ ಈ  ಘಟನೆ ನಡೆದಿದ್ದು, ಜಾನ್ ಎಂದು ಗುರುತಿಸಲಾದ 50 ವರ್ಷದ ನೈಜೀರಿಯನ್ ವ್ಯಕ್ತಿ ಮಹಿಳೆಯೊಂದಿಗೆ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಎದ್ದು ತನ್ನ ಚಾಕುವನ್ನು ಹೊರತೆಗೆದು ದಾರಿಹೋಕರ ಮೇಲೆ ದಾಳಿ ನಡೆಸಿದ ಎಂದು ದಕ್ಷಿಣ ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ದಿಲೀಪ್ ಸಾವಂತ್ ಹೇಳಿದ್ದಾರೆ.

ಘಟನೆಯಲ್ಲಿ ಕನಿಷ್ಠ ಏಳರಿಂದ ಎಂಟು ಜನರು ಗಾಯಗೊಂಡಿದ್ದಾರೆ ಮತ್ತು ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ವ್ಯಕ್ತಿಯನ್ನು ಬಂಧಿಸಿ ಚಾಕು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News