ಯಕ್ಷಗಾನ ಕಲಾರಂಗದ ಮೂವತ್ತನೇ ಮನೆ ವಿದ್ಯಾರ್ಥಿನಿಗೆ ಹಸ್ತಾಂತರ

Update: 2022-06-16 15:54 GMT

ಉಡುಪಿ, ಜೂ.೧೬: ಯಕ್ಷಗಾನ ಕಲಾರಂಗ ಸಂಸ್ಥೆಯ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯಾದ ಪಾದೂರಿನ ಮಲ್ಲಿಕಾ ಶೆಟ್ಟಿ ಇವರಿಗೆ ಮಂಗಳೂರಿನ ಉದ್ಯಮಿ ಪಿ.ಗೋಕುಲನಾಥ ಪ್ರಭು ತಮ್ಮ ತಾಯಿ ಪದ್ಮಾವತಿ ವೆಂಕಟ್ರಾಯ ಪ್ರಭು ಅವರ ಜನ್ಮಶತಾಬ್ದದ ಶುಭಾವಸರದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ’ಪದ್ಮಾವತಿ’ಯನ್ನು ನಿವೇದಿತಾ ಜಿ. ಪ್ರಭು ಮತ್ತು ಪಿ. ಗೋಕುಲನಾಥ ಪ್ರಭು ಗುರುವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ.ಜೆ.ಎನ್. ಭಟ್ ಮತ್ತು ಶಾಂತಿ ಎನ್. ಭಟ್ ಅವರು ಮನೆಯವರಿಗೆ ಶುಭಕೋರಿದರು. ಗೋಕುಲನಾಥ್ ಪ್ರಭು ಅವರ ಪುತ್ರ ಅವಿನಾಶ್ ಪ್ರಭು, ಯು. ವಿಶ್ವನಾಥ ಶೆಣೈ, ನಾಯಕ್ ಬಾಳಿಗಾ, ಲೀಲಾಧರ ಶೆಟ್ಟಿ ಕಾಪು, ಅನಂತ ಮೂಡಿತ್ತಾಯ ಭಾಗವಹಿಸಿದ್ದರು. 

ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಮನೋಹರ ಕೆ., ಪ್ರೊ. ಕೆ. ಸದಾಶಿವ ರಾವ್, ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ್ ಹೆಗ್ಡೆ, ಎ.ನಟರಾಜ ಉಪಾಧ್ಯ, ಜಯ್ ಕುಮಾರ್ ಮುದ್ರಾಡಿ, ಕೆ. ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಅಶೋಕ್ ಎಂ., ಆನಂದ ಶೆಟ್ಟಿ, ಮಂಜುನಾಥ, ನಾಗರಾಜ ಹೆಗಡೆ ಹಾಗೂ ಇನ್ನಂಜೆ ಪ್ರೌಢಶಾಲೆಯ ಅಧ್ಯಾಪಕರು ಉಪಸ್ಥಿತರಿದ್ದರು. 

ಇದು ಸಂಸ್ಥೆಯು ದಾನಿಗಳ ನೆರನಿಂದ ನಿರ್ಮಿಸಿಕೊಟ್ಟ ೩೦ನೇ ಮನೆಯಾಗಿದೆ. ಈ ತಿಂಗಳಿನಲ್ಲಿ ಇನ್ನೂ ೫ ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸುತ್ತಾ ನುಡಿದರು. ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News