ನಾವು ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದನ್ನು ಬಯಸುವುದಿಲ್ಲ: ಶಿವಸೇನೆಯ ಬಂಡಾಯ ಶಾಸಕ ದೀಪಕ್ ಹೇಳಿಕೆ

Update: 2022-06-23 07:34 GMT
Photo: twitter

ಮುಂಬೈ:  ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಬಂಡಾಯ ಶಾಸಕರು ಬಯಸುವುದಿಲ್ಲ, ಬದಲಿಗೆ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಹೊಸ ಸರಕಾರ ರಚಿಸಬೇಕು ಎಂದು ಏಕನಾಥ್ ಶಿಂಧೆ ನೇತೃತ್ವದ ಪಕ್ಷದ ಬಂಡಾಯ ಶಾಸಕರ ಪಾಳಯಕ್ಕೆ ಸೇರ್ಪಡೆಗೊಂಡಿರುವ ಶಿವಸೇನಾ ಶಾಸಕ ದೀಪಕ್ ಕೇಸರ್ಕರ್ ಅವರು ಗುರುವಾರ ಹೇಳಿದ್ದಾರೆ.

ಕೇಸರ್ಕರ್ ಅವರು ಏಕನಾಥ್ ಶಿಂಧೆ ಬಣವನ್ನು ಸೇರಲು ಗುರುವಾರ ಬೆಳಿಗ್ಗೆ ಬಿಜೆಪಿ ಆಡಳಿತದ ಅಸ್ಸಾಂನ ಗುವಾಹಟಿಗೆ ತೆರಳಿದರು. ಕೇಸರ್ಕರ್ ನಿನ್ನೆಯವರೆಗೂ ಉದ್ಧವ್ ಠಾಕ್ರೆ ಅವರೊಂದಿಗೆ ಕಾಣಿಸಿಕೊಂಡಿದ್ದರು.

ದೂರವಾಣಿಯಲ್ಲಿ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, ಮೂವರು ಶಿವಸೇನಾ ಶಾಸಕರು ಹಾಗೂ  ಕನಿಷ್ಠ ಒಬ್ಬ ಸ್ವತಂತ್ರ ಶಾಸಕರು  ವಿಮಾನದಲ್ಲಿ ತಮ್ಮೊಂದಿಗೆ ಇದ್ದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News