ಅಂಬಲಪಾಡಿ: ಯಕ್ಷಗಾನ ತರಗತಿ ಆರಂಭ

Update: 2022-06-23 16:02 GMT

ಉಡುಪಿ : ಅಂಬಲಪಾಡಿಯ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ  ಆಶ್ರಯದಲ್ಲಿ ೧೮ ವರ್ಷ ಮೇಲ್ಪಟ್ಟ ಯಕ್ಷಗಾನ ಕಲಾಸಕ್ತರಿಗೆ ಸಂಪ್ರದಾಯ ಬದ್ಧ ಯಕ್ಷಗಾನ ಹೆಜ್ಜೆಗಾರಿಕೆ ಮತ್ತು ನಾಟ್ಯ ತರಬೇತಿ ತರಗತಿಗಳು ಆರಂಭಗೊಳ್ಳಲಿವೆ. 

ಜುಲೈ ೩ರಂದು ಬೆಳಗ್ಗೆ ೧೦:೦೦ಗಂಟೆಗೆ ಅಂಬಲಪಾಡಿ ಕಂಬ್ಳಕಟ್ಟದಲ್ಲಿರುವ ಮಂಡಳಿಯ ‘ಶ್ರೀಜನಾರ್ದನ ಮಂಟಪ’ದಲ್ಲಿ ಉಪಸ್ಥಿತರಿರಬೇಕು. ಈ ಕುರಿತು ಮಂಡಳಿಯ ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ (೯೮೪೫೩೦೯೮೩೬) ಅಥವಾ ಪ್ರವೀಣ್ ಉಪಾಧ್ಯ (೯೪೪೮೭೨೪೦೩೬) ಇವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News