ಉಡುಪಿ; ಅಂಗಡಿಗೆ ನುಗ್ಗಿ 5.47 ಲಕ್ಷ ರೂ. ಮೌಲ್ಯದ ಸಿಗರೇಟು ಕಳವು

Update: 2022-06-23 16:05 GMT

ಉಡುಪಿ : ಕುತ್ಪಾಡಿ ಗ್ರಾಮದ ಬಲಾಯಿಪಾದೆಯ ಸಂಗಮ್ ಹೊಟೇಲ್ ಪಕ್ಕದ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿ ದಾಸ್ತಾನಿರಿಸಿದ್ದ ೫.೪೭ ಲಕ್ಷ ರೂ.ಮೌಲ್ಯದ ಸಿಗರೇಟ್ ಪ್ಯಾಕ್ ಹಾಗೂ 17 ಸಾವಿರ ರೂ.ನಗದು ಹಣವನ್ನು ಕಳವು ಮಾಡಿದ ಘಟನೆ ನಡೆದಿದೆ.

ಆನಂದ್ ಭಟ್ ಎಂಬವರು ಪ್ರಶಾಂತ್ ಶೆಟ್ಟಿ ಎಂಬವರೊಂದಿಗೆ ಸೇರಿ ಬಲಾಯಿಪಾದೆಯಲ್ಲಿ ಸಮೃದ್ಧಿ ಎಂಟರ್‌ಪ್ರೈಸಸ್ ಎಂಬ ವಿತರಣಾ ಅಂಗಡಿಯನ್ನು ನಡೆಸಿಕೊಂಡಿದ್ದು, ಇದರಲ್ಲಿ ಐಟಿಸಿ ಕಂಪೆನಿಯ ಸಿಗರೇಟ್ ಹಾಗೂ ಇತರ ಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದರು.

ಈ ಅಂಗಡಿಗೆ ಜೂ.೨೧ರ ರಾತ್ರಿಯಿಂದ ೨೨ರ ಬೆಳಗ್ಗೆ ೮:೧೫ರ ನಡುವಿನ ಅವಧಿಯಲ್ಲಿ ಅಂಗಡಿಯ ಶೆಟರ್‌ಗೆ ಹಾಕಿದ್ದ ಬೀಗವನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಅಂಗಡಿಯ ಕ್ಯಾಶ್ ಡ್ರಾವರ್‌ನಲ್ಲಿದ್ದ 17 ಸಾವಿರ ರೂ.ನಗದು ಹಾಗೂ ೫,೪೭,೦೦೦ ರೂ.ಮೌಲ್ಯದ ಐಟಿಸಿ ಕಂಪೆನಿಯ ಸಿಗರೇಟ್ ಪ್ಯಾಕ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ೫,೬೪,೭೪೪ರೂ.ಗಳೆಂದು ಆಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News