ಮಹಾರಾಷ್ಟ್ರದ ಶಾಸಕರು ಅಸ್ಸಾಂನಲ್ಲಿ ತಂಗಿದ್ದಾರೋ, ಇಲ್ಲವೋ ಗೊತ್ತಿಲ್ಲ: ಮುಖ್ಯಮಂತ್ರಿ ಹಿಮಂತ ಬಿಸ್ವಾ

Update: 2022-06-24 04:51 GMT
Photo:PTI

ಗುವಾಹಟಿ: ಮಹಾರಾಷ್ಟ್ರ ಸರಕಾರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆ 40 ಕ್ಕೂ ಹೆಚ್ಚು ಶಿವಸೇನೆಯ ಶಾಸಕರ ಬಂಡಾಯ ಗುಂಪು ಗುವಾಹಟಿಯ ಹೊರವಲಯದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮಹಾ ವಿಕಾಸ್ ಅಘಾಡಿ ಸರಕಾರವು ಪತನದಂಚಿಗೆ ತಲುಪಿದೆ. ಈ ವಾರದ ಅತ್ಯಂತ ದೊಡ್ಡ ರಾಜಕೀಯ ಬೆಳವಣಿಗೆಗೂ  ರಾಜ್ಯಕ್ಕೂ  ಯಾವುದೇ ಸಂಬಂಧವಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

"ಅಸ್ಸಾಂನಲ್ಲಿ ಸಾಕಷ್ಟು ಉತ್ತಮ ಹೋಟೆಲ್‌ಗಳಿವೆ. ಯಾರು ಬೇಕಾದರೂ ಅಲ್ಲಿಗೆ ಬಂದು ತಂಗಬಹುದು.. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಮಹಾರಾಷ್ಟ್ರದ ಶಾಸಕರು ಅಸ್ಸಾಂನಲ್ಲಿ ತಂಗಿದ್ದಾರೋ,  ಇಲ್ಲವೋ ಗೊತ್ತಿಲ್ಲ. ಬೇರೆ ರಾಜ್ಯಗಳ ಶಾಸಕರೂ ಅಸ್ಸಾಂಗೆ ಬಂದು ಉಳಿಯಬಹುದು ಎಂದು ಶರ್ಮಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News