ಒಡಿಯಾ ನಟ ರಾಯ್‌ಮೋಹನ್ ಪರಿದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

Update: 2022-06-24 17:39 GMT

ಭುವನೇಶ್ವರ, ಜೂ. 24:  ಒಡಿಯಾ ಸಿನೆಮಾ ಹಾಗೂ ರಂಗಭೂಮಿಯ ಹಿರಿಯ ಕಲಾವಿದ ರಾಯ್‌ಮೋಹನ್ ಪರಿದ (58) ಭುವನೇಶ್ವರದ ಪ್ರಾಚಿ ವಿಹಾರ್ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. 
ರಾಯ್‌ಮೋಹನ್ ಪರಿದಾ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.  
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡು ಬಂದಿದೆ. ಆದರೆ, ತನಿಖೆ ಮುಂದುವರಿದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಋಣಾತ್ಮಕ ಪಾತ್ರಗಳಿಂದ ಹೆಚ್ಚು ಜನಪ್ರಿಯರಾಗಿರುವ ರಾಜ್‌ಮೋಹನ್ ಪರಿದ ಅವರು 100ಕ್ಕೂ ಅಧಿಕ ಒಡಿಯಾ ಹಾಗೂ 15 ಬೆಂಗಾಳಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ಕೂಡ ಅವರು ಜನಪ್ರಿಯರಾಗಿದ್ದರು. 

ಕಿಯೋಂಝಾರ್ ಜಿಲ್ಲೆಯಲ್ಲಿ ಜನಿಸಿದ ಪರಿದ ಅವರು ರಾಮ ಲಕ್ಷ್ಮಣ್, ಆಸಿಬು ಕೆಬೆ ಸಾಜಿ ಮೋ ರಾಣಿ, ನಾಗ ಪಂಚಮಿ, ಉದಾಂದಿ ಸೀತಾ, ತು ತಿಲೆ ಮೋ ದಾರಾ ಕಹಕು, ರಾನಾ ಭೂಮಿ, ಸಿಂಘ ಬಾಹಿನಿ, ಕುಲನಂದನ ಹಾಗೂ ಕಂಧೇಯಿ ಆಖಿರಾ ಲುಹಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News