​ಕಾಸರಗೋಡು : ಗಲ್ಫ್‌ನಿಂದ ಬಂದ ಯುವಕನನ್ನು ಅಪಹರಿಸಿ, ಕೊಲೆ

Update: 2022-06-26 17:59 GMT

ಕಾಸರಗೋಡು : ಗಲ್ಫ್ ಉದ್ಯೋಗಿಯಾದ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದು ಆಸ್ಪತ್ರೆಗೆ ತಲುಪಿಸಿ ತಂಡವು ಪರಾರಿಯಾದ ಘಟನೆ ಇಂದು ಸಂಜೆ ಬಂದ್ಯೋಡ್ ನಲ್ಲಿ ನಡೆದಿದೆ.

ಸೀತಾಂಗೋಳಿ ಮುಗುವಿನ  ಅಬೂಬಕ್ಕರ್ ಸಿದ್ದಿಕ್ (32) ಕೊಲೆಗೀಡಾದ ಯುವಕ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಈ ಕೃತ್ಯ ನಡೆದಿದೆ ಎಂದು ಪೋಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶನಿವಾರವಷ್ಟೇ ಯುವಕ ಗಲ್ಫ್ ನಿಂದ ಊರಿಗೆ ಬಂದಿದ್ದು,  ಇಂದು  ಮಧ್ಯಾಹ್ನ ಪೈವಳಿಕೆ ನಿವಾಸಿ ಸೇರಿದಂತೆ ಇಬ್ಬರು ಕಾರಿನಲ್ಲಿ  ಸಿದ್ದಿಕ್ ನನ್ನು ಅಪಹರಿಸಿದ್ದು , ಬಳಿಕ ರಾತ್ರಿ 9 ಗಂಟೆಯ  ಸುಮಾರಿಗೆ ಬಂದ್ಯೋಡಿನ ಆಸ್ಪತ್ರೆಗೆ  ವಾಹನವೊಂದರಲ್ಲಿ ತಲುಪಿಸಿದ  ತಂಡವು ಕೆಲ ನಿಮಿಷದಲ್ಲೇ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ವೈದ್ಯರು ತಪಾಸಣೆ ನಡೆಸಿದಾಗ ಯುವಕ ಮೃತಪಟ್ಟಿರುವುದು ದೃಢಪಟ್ಟಿದೆ. ಬಳಿಕ ಆಸ್ಪತ್ರೆ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು , ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಲ್ಲೆಯಿಂದ ಯುವಕನ ದೇಹದಲ್ಲಿ ಗಾಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು,   ದಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News