ಉಡುಪಿ: ಗಿರಿಜಾ ಹೆಲ್ತ್‌ಕೇರ್‌ನಿಂದ ವೈದ್ಯರ ದಿನಾಚರಣೆ

Update: 2022-07-01 14:15 GMT

ಉಡುಪಿ: ಗಿರಿಜಾ ಹೆಲ್ತ್‌ಕೇರ್ ವತಿಯಿಂದ ಉಡುಪಿ, ಕುಂದಾಪುರ ಹಾಗೂ ಮಂಗಳೂರು ಶಾಖೆಯಲ್ಲಿ ವೈದ್ಯರ ದಿನವನ್ನು ಶುಕ್ರವಾರ ಆಚರಿಸಲಾಯಿತು.

ಉಡುಪಿಯಲ್ಲಿ ಉಡುಪಿ ಟೆಂಪಲ್ ಸಿಟಿ ಲಯನ್ಸ್ ಕ್ಲಬ್ ಸಹಯೋಗ ದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ರವೀಂದ್ರನಾಥ್, ಡಾ.ಭಾಸ್ಕರ್ ಪಾಲನ್, ಡಾ.ಅಶೋಕ್ ಕುಮಾರ್, ಡಾ.ರಂಜಿತಾ ನಾಯಕ್, ಡಾ.ಮರಿಯೆಟ್ ಡಿಸೋಜ, ಡಾ.ದೀಪಾ ನಾಯಕ್, ಡಾ.ಶ್ರೀಪತಿ ಎಂ.ಭಟ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ.ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು, ವಿಜಯ ಕುಮಾರ್ ಉದ್ಯಾವರ, ಸಂತೋಷ್ ಉದ್ಯಾ ವರ, ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್‌ನ ರವೀಂದ್ರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಅದೇ ರೀತಿ ಸಂಸ್ಥೆಯ ಕುಂದಾಪುರ ಹಾಗೂ ಮಂಗಳೂರಿನ ಶಾಖೆಯಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವೈದ್ಯರುಗಳನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News