ತಲ್ಲೂರು ಕೋಟಿ ಕೋಟ್ಯಾನ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮ

Update: 2022-07-03 13:01 GMT

ಕುಂದಾಪುರ: ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ತಲ್ಲೂರು ಶಾಖಾ ವ್ಯವಸ್ಥಾಪಕ, ತಾಪಂ ಮಾಜಿ ಸದಸ್ಯ, ಬಿಲ್ಲವ ಸಮಾಜದ ಮುಖಂಡ, ತಲ್ಲೂರು ಕೋಟಿ ಕೋಟ್ಯಾನ್ ಅವರಿಗೆ ಶ್ರದ್ಧಾಂಜಲಿ ಕಾರ್ಯ ಕ್ರಮವನ್ನು ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ರವಿವಾರ ತಲ್ಲೂರಿನ ಮೂರ್ತೆದಾರರ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ವಕೀಲ ಟಿ.ಬಿ.ಶೆಟ್ಟಿ ಮಾತನಾಡಿ, ನನ್ನ ಹಾಗೂ ಟಿ.ಕೆ.ಕೋಟ್ಯಾನ್ ಅವರ ಸಂಬಂಧ ರಾಜಕೀಯ, ಜಾತಿ, ಧರ್ಮವನ್ನು ಮೀರಿದ್ದು. ಅವರೊಂದಿಗೆ ಬಹಳಷ್ಟು ಒಡನಾಟ ಇತ್ತು. ಎಲ್ಲ ಸಂಬಂಧಕ್ಕಿಂತಲೂ ಮಾನವೀಯ ಸಂಬಂಧ ದೊಡ್ಡದಾಗಿದ್ದು, ಕೋಟ್ಯಾನ್ ಅವರು ಈ ಸಾಲಿನಲ್ಲಿ ನಿಲ್ಲಬಲ್ಲ ವ್ಯಕ್ತಿ ಎಂದರು.

ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಕೃಷ್ಣ ಪೂಜಾರಿ, ಬೆಂಗಳೂರು ಬಿಲ್ಲವ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಪೂಜಾರಿ, ತಲ್ಲೂರು ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು, ತಲ್ಲೂರು ಮಹಾಲಿಂಗೇಶ್ವರದ ದೇವಸ್ಥಾನದ ವಸಂತ ಆರ್. ಹೆಗ್ಡೆ ನುಡಿನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News