ಕೆಸರು ನೀರಿನಲ್ಲಿ ಜಾರಿ ಬಿದ್ದು ಯುವಕ ಮೃತ್ಯು

Update: 2022-07-13 10:58 GMT

ಕೋಟ, ಜು.೧೩: ತೋಟದಲ್ಲಿ ಕೆಸರು ನೀರಿನಲ್ಲಿ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಐರೋಡಿ ಗ್ರಾಮದ ಮಾಬುಕಳ ಪಂಚಾಯತ್ ಹಿಂಬದಿ ಜು.೧೧ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಮಾಬುಕಳ ನಿವಾಸಿ ಜಾಕ್ಸನ್ ಪೌಲ್ ಲೂವಿಸ್(೨೮) ಎಂದು ಗುರುತಿಸಲಾಗಿದೆ. ಇವರು ಮನೆ ಯಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದರು. ಪೆಟ್ರೋಲ್ ಬಂಕ್ ಹಾಗೂ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಈಗ ಕೆಲಸ ಇಲ್ಲದೆ ಮದ್ಯ ಪಾನ ಮಾಡಿಕೊಂಡು ತಿರುಗಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ವಿಪರೀತ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ಜಾನ್ಸನ್, ಭಾರೀ ಮಳೆಯಿಂದ ನೀರು ತುಂಬಿದ ತೆಂಗಿನ ತೋಟದ ಕೆಸರಿನಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಮೃತ ಪಟ್ಟಿದ್ದಾರೆನ್ನಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News