ಬೆಂಗಾವಲು ಪಡೆ ವಾಹನ ನಿಲ್ಲಿಸಿ ಮಹಿಳೆ, ಆಕೆಯ ಮಗನಿಗೆ ನೆರವಾದ ಆಂಧ್ರ ಸಿಎಂ ಜಗನ್ ರೆಡ್ಡಿ

Update: 2022-08-05 10:26 GMT

ತುನಿ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಬೆಂಗಾವಲು ಪಡೆ ವಾಹನ  ಸ್ವಲ್ಪ ಸಮಯದವರೆಗೆ ನಿಲ್ಲಿಸಿ ಮಹಿಳೆ ಹಾಗೂ ಆಕೆಯ  ಅನಾರೋಗ್ಯ ಪೀಡಿತ ಪುತ್ರನಿಗೆ  ಸಹಾಯ ಹಸ್ತ ಚಾಚಿದ ಮಾನವೀಯ ಘಟನೆ ಗುರುವಾರ ನಡೆದಿದೆ.

ಮುಖ್ಯಮಂತ್ರಿ ಜಗನ್ ರೆಡ್ಡಿ ಅವರು ಕಾಕಿನಾಡ ಜಿಲ್ಲೆಯ ತುನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನಸಂದಣಿಯ ನಡುವೆ ತನ್ನ ಮಗನನ್ನು ಕೈಯಲ್ಲಿ ಹಿಡಿದುಕೊಂಡು ಮಗನ ಅನಾರೋಗ್ಯಕ್ಕೆ ಸಹಾಯ ಕೇಳುತ್ತಿದ್ದ ಮಹಿಳೆಯೊಬ್ಬರನ್ನು ಕಂಡ ರೆಡ್ಡಿ ಅವರು ತಮ್ಮ ಬೆಂಗಾವಲು ಪಡೆಯನ್ನು ಸ್ವಲ್ಪ ಹೊತ್ತು ನಿಲ್ಲಿಸಿ ಮಹಿಳೆಯೊಂದಿಗೆ ಮಾತನಾಡಿದರು.

ಪ್ರತಿಪಾಡು ಕ್ಷೇತ್ರದ ಶಂಖವರಂ ಮಂಡಲದ ಮಂಡಪಂ ಗ್ರಾಮದ ತನುಜಾ ಎಂಬ ಮಹಿಳೆ ತನ್ನ ಮಗನ ಆರೋಗ್ಯ ಸ್ಥಿತಿಯನ್ನು ಮುಖ್ಯಮಂತ್ರಿಯವರಿಗೆ ವಿವರಿಸಿ ಸಹಾಯ ಕೋರಿದರು.

ಬಳಿಕ ಮಹಿಳೆ ಹಾಗೂ ಆಕೆಯ ಮಗನಿಗೆ ಕೂಡಲೇ ನೆರವು ನೀಡುವಂತೆ ಜಿಲ್ಲಾಧಿಕಾರಿಗೆ ರೆಡ್ಡಿ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News