ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನೂ ಹಾವು ಕಡಿತದಿಂದ ಸಾವು!

Update: 2022-08-05 11:18 GMT
ಸಾಂದರ್ಭಿಕ ಚಿತ್ರ (outlookindia.com)

ಲಕ್ನೋ: ಹಾವು ಕಡಿತದಿಂದ ಸಾವನ್ನಪ್ಪಿದ ತನ್ನ ಹಿರಿಯ ಸಹೋದರನ ಅಂತ್ಯಕ್ರಿಯೆಗೆಂದು ಮನೆಗೆ ಆಗಮಿಸಿದ್ದ ಯುವಕ ಕೂಡ ರಾತ್ರಿ ಮಲಗಿದ್ದ ವೇಳೆ ಹಾವು ಕಡಿತಕ್ಕೊಳಗಾಗಿ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಭವಾನಿಪುರದಲ್ಲಿ ನಡೆದಿದೆ.

ಗ್ರಾಮದ ಅರವಿಂದ ಮಿಶ್ರಾ (38) ಹಾವು ಕಡಿತದಿಂದ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಗಾಗಿ ಕಿರಿಯ ಸಹೋದರ ಗೋವಿಂದ್ ಮಿಶ್ರಾ (22) ಲುಧಿಯಾನದಿಂದ ಆಗಮಿಸಿದ್ದರು.  ಬುಧವಾರ ಅರವಿಂದ್ ಮಿಶ್ರಾ ಅವರ ಅಂತ್ಯಕ್ರಿಯೆ ನಡೆದಿತ್ತು. ಅದೇ ರಾತ್ರಿ ಗೋವಿಂದ್ ಮಲಗಿದ್ದ ವೇಳೆ ಹಾವು ಅತನಿಗೆ ಕಡಿದಿತ್ತು. ಅದೇ ಮನೆಯಲ್ಲಿದ್ದ ಚಂದ್ರಶೇಖರ್ ಪಾಂಡೆ (22) ಎಂಬಾತನಿಗೂ ಹಾವು ಕಡಿದಿದೆ.

ಇದನ್ನೂ ಓದಿ: ಮಂಗಳೂರು | ನಾಲ್ವರ ಕೊಲೆ ಆರೋಪಿ ಪ್ರವೀಣ್‌ ಬಿಡುಗಡೆಗೆ ಸರಕಾರ ಸಿದ್ಧತೆ

ಗೋವಿಂದ್ ಮಿಶ್ರಾ ಮೃತಪಟ್ಟರೆ ಪಾಂಡೆ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇಬ್ಬರೂ ಅರವಿಂದ್ ಮಿಶ್ರಾ ಅವರ ಅಂತ್ಯಕ್ರಿಯೆಗೆ ಲುಧಿಯಾನಾದಿಂದ ಜೊತೆಯಾಗಿ ಆಗಮಿಸಿದ್ದರು.

ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ದುಃಖತಪ್ತ ಕುಟುಂಬವನ್ನು ಭೇಟಿಯಾದ ಸ್ಥಳೀಯ ಶಾಸಕ ಕೈಲಾಶ್ ನಾಥ್ ಶುಕ್ಲಾ, ಸಹಾಯವೊದಗಿಸುವ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News