ಹಾಸನದಲ್ಲಿ ಕಾರು ಅಪಘಾತ; ಕಾಸರಗೋಡಿನ ಯುವಕ ಮೃತ್ಯು
Update: 2022-08-08 05:15 GMT
ಕಾಸರಗೋಡು : ಹಾಸನದಲ್ಲಿ ಉಂಟಾದ ಕಾರು ಅಪಘಾತದಲ್ಲಿ ಕಾಸರಗೋಡು ಚೆಂಗಳದ ಯುವಕನೋರ್ವ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಚೆಂಗಳ ನೆಲ್ತಡ್ಕ ನಿವಾಸಿ ರಾಜೀವ್ ಎಂಬವರ ಪುತ್ರ ಆದರ್ಶ್ (28) ಮೃತರು ಎಂದು ತಿಳಿದುಬಂದಿದೆ.
ಆದರ್ಶ್ ಅವರಿಗೆ ಹಾಸನದಲ್ಲಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಅವರು ಹಾಸನಕ್ಕೆ ತೆರಳಿದ್ದರು. ಈ ಸಂದರ್ಭ ಕಾರು ಅಪಘಾತದಲ್ಲಿ ಅವರು ಗಂಭೀರ ಗಾಯಗೊಂಡು ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.