ಆ. 13ರಿಂದ 15: ಕನಕ ಗೋಪುರಕ್ಕೆ ತಿರಂಗಾ ಬಣ್ಣ

Update: 2022-08-11 16:55 GMT

ಉಡುಪಿ, ಆ.೧೧: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಸೌತ್ ಕೆನರಾ ಪೋಟೋಗ್ರಾಫರ್ಸ್‌  ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವ ದಲ್ಲಿ ಗಾಂಧಿ ಆಸ್ಪತ್ರೆಯ ಪಂಚಮಿ ಟ್ರಸ್ಟ್‌ನ ಸಹಯೋಗದೊಂದಿಗೆ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿರುವ ಕನಕ ಗೋಪುರ  ಆ.೧೩ರಿಂದ ೧೫ರವರೆಗೆ ಸಂಜೆಯ ವೇಳೆ ತಿರಂಗಾ ಬಣ್ಣದೊಂದಿಗೆ ಝಗಮಗಿಸಲಿದೆ.

ಕಾರ್ಯಕ್ರಮಕ್ಕೆ ಆ.೧೩ರ ಸಂಜೆ ೬:೦೦ಗಂಟೆಗೆ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಚಾನೆ ನೀಡಲಿದ್ದಾರೆ. ಆ.೧೩ರ ಶನಿವಾರ ಸಂಜೆ ೬:೩೦ರಿಂದ ೧೦ರವರೆಗೆ, ಆ.೧೪ರ ರವಿವಾರ ಸಂಜೆ ೬:೩೦ರಿಂದ ಮಧ್ಯರಾತ್ರಿ ೧:೦೦ಗಂಟೆಯವರೆಗೆ ಹಾಗೂ ಆ.೧೫ರ ಸೋಮವಾರ ಸಂಜೆ ೬:೩೦ರಿಂದ ೧೦:೦೦ರವರೆಗೆ ಕನಕ ಗೋಪುರ ತ್ರಿವರ್ಣದಲಿ ಕಂಗೊಳಿಸಲಿದೆ ಎಂದು ಅಸೋಸಿಯೇಷನ್‌ನ ಉಡುಪಿ ವಲಯಾಧ್ಯಕ್ಷ ಜನಾರ್ದನ ಕೊಡವೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News