ಕಳಪೆ ಗುಣಮಟ್ಟದ ಆಹಾರ ಪೂರೈಕೆ: ಕೇಟರಿಂಗ್ ಮ್ಯಾನೇಜರ್‌ಗೆ ಶಿವಸೇನ ಶಾಸಕನಿಂದ ಕಪಾಳಮೋಕ್ಷ

Update: 2022-08-16 05:04 GMT
Photo:twitter

ಮುಂಬೈ: ಕಳಪೆ ಗುಣಮಟ್ಟದ ಆಹಾರ (poor quality of food )ನೀಡಿದ್ದಕ್ಕಾಗಿ ಏಕನಾಥ್ ಶಿಂಧೆ ಅವರ ಪಾಳೆಯದಲ್ಲಿ ಗುರುತಿಸಿಕೊಂಡಿರುವ  ಶಿವಸೇನೆ ಶಾಸಕರೊಬ್ಬರು(Shiv Sena MLA) ಕೇಟರಿಂಗ್ ಸೇವೆಯನ್ನು ಒದಗಿಸುವ  ವ್ಯವಸ್ಥಾಪಕರನ್ನು ನಿಂದಿಸಿ, ಕಪಾಳಕ್ಕೆ ಹೊಡೆದಿರುವ (Slaps Catering Manager) ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮದ ಅಂಗವಾಗಿ ಕಾರ್ಮಿಕರಿಗೆ ಬಡಿಸಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರಕ್ಕಾಗಿ ಮ್ಯಾನೇಜರ್‌ಗೆ ಶಾಸಕ ಸಂತೋಷ್ ಬಂಗಾರ್ ನಿಂದಿಸಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆಹಾರದ ಗುಣಮಟ್ಟದ ಬಗ್ಗೆ ನಾನು ದೂರು ಸ್ವೀಕರಿಸಿದ್ದೇನೆ ಎಂದು ಬಂಗಾರ್  ಎಂದು ಹೇಳಿಕೊಂಡಿದ್ದಾರೆ.  ನಂತರ ಅದನ್ನು ಸ್ವತಃ ಪರಿಶೀಲಿಸಲು ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಹಿಂಗೋಲಿಯ ಶಿವಸೇನೆಯ ಶಾಸಕ ಬಂಗಾರ್  ಜುಲೈನಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಕೆಲವೇ ನಿಮಿಷಗಳ ಮೊದಲು ಶಿಂಧೆ ಪಾಳಯವನ್ನು ಸೇರಿಕೊಡಿದ್ದರು. ನಂತರ ಉದ್ದವ್ ಠಾಕ್ರೆ ಅವರು ಬಂಗಾರ್ ಅವರನ್ನು ಹಿಂಗೋಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News