ಗುಲಾಂ ನಬಿ ಆಝಾದ್ ರಾಜೀನಾಮೆಗೆ ಬೇಸರ ವ್ಯಕ್ತಪಡಿಸಿದ ಉಮರ್ ಅಬ್ದುಲ್ಲಾ

Update: 2022-08-26 09:33 GMT

ಶ್ರೀನಗರ: ಗುಲಾಂ ನಬಿ ಆಝಾದ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ ಎಂದಿರುವ  ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ, (Omar Abdullah)ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯವನ್ನು ನೋಡುವುದಕ್ಕೆ "ಬೇಸರ" ವಾಗುತ್ತಿದೆ ಹಾಗೂ ಇದು  "ಭಯಾನಕ" ವಾಗಿದೆ ಎಂದು ಹೇಳಿದ್ದಾರೆ.

" ಬಹಳ ಕಾಲದಿಂದ  ವದಂತಿಗಳಿದ್ದವು. ಬಹುಶಃ ಇತ್ತೀಚಿನ ದಿನಗಳಲ್ಲಿ ಪಕ್ಷವನ್ನು ತೊರೆದ ಅತ್ಯಂತ ಹಿರಿಯ ನಾಯಕ ಆಝಾದ್ ಅವರ ರಾಜೀನಾಮೆ ಪತ್ರವು ತುಂಬಾ ನೋವಿನಿಂದ ಕೂಡಿದೆ" ಎಂದು ಅಬ್ದುಲ್ಲಾ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News