ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್ ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಶಿಫಾರಸು: ವರದಿ

Update: 2022-08-26 11:55 GMT

ಹೊಸದಿಲ್ಲಿ: ಜಾರ್ಖಂಡ್‌ ನ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌(Hemant Soren) ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿರುವುದಾಗಿ ndtv.com ವರದಿ ಮಾಡಿದೆ. 

 ಈ ಕುರಿತು ರಾಜಭವನದಿಂದ ಔಪಚಾರಿಕ ಘೋಷಣೆಯ ನಂತರ, ಅವರು ರಾಜೀನಾಮೆ ನೀಡಬೇಕಾಗುತ್ತದೆ. ಆದರೆ, ಆರು ತಿಂಗಳಲ್ಲಿ ಮರು ಆಯ್ಕೆಯಾಗಬಹುದು ಮತ್ತು ಯುಪಿಎ ಶಾಸಕರು ಅವರನ್ನು ನಾಯಕರಾಗಿ ಮರು ಆಯ್ಕೆ ಮಾಡಿದರೆ ಮುಖ್ಯಮಂತ್ರಿಯಾಗಿಯೂ ಮುಂದುವರಿಯಬಹುದು ಎಂದು ವರದಿ ತಿಳಿಸಿದೆ.

ಜಾರ್ಖಂಡ್‌ನ ಹಿರಿಯ ನಾಯಕರಾದ ಸರಯು ರಾಯ್ ಅವರು, ಸೊರೆನ್ ಶಾಸಕ ಸ್ಥಾನಕ್ಕೆ ಅರ್ಹರಲ್ಲ ಎಂದು ಚುನಾವಣಾ ಆಯೋಗವು ಘೋಷಿಸಿದೆ ಎಂದು ಅವರ "ಬಹಳ ವಿಶ್ವಾಸಾರ್ಹ ಮೂಲಗಳು" ತಿಳಿಸಿವೆ ಎಂದು ಹೇಳಿದ್ದಾಗಿ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News