ಅಂಗಡಿಗೆ ನುಗ್ಗಿ ನಗದು ಕಳವು
Update: 2022-08-30 15:46 GMT
ಕುಂದಾಪುರ : ವಡೇರಹೋಬಳಿ ಗ್ರಾಮದ ಬಿ.ಸಿ.ರೋಡ್ ಬಳಿಯ ದಿವ್ಯಶ್ರೀ ಕಾಂಪ್ಲೆಕ್ಸ್ನ ಕೆಳ ಅಂತಸ್ತಿನಲ್ಲಿರುವ ಶ್ರೀಬ್ರಹ್ಮಲಿಂಗೇಶ್ವರ ಜನರಲ್ ಸ್ಟೋರ್ ದಿನಸಿ ಅಂಗಡಿಗೆ ಆ.28ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸ್ಥಳೀಯ ನಿವಾಸಿ ರಮೇಶ ಮೊಗವೀರ ಎಂಬವರ ಅಂಗಡಿ ಶೆಟರ್ ಎದುರು ಇರುವ ಕಬ್ಬಿಣದ ಗ್ರಿಲ್ಸ್ನ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು, ಕ್ಯಾಶ್ ಕೌಂಟರ್ನಲ್ಲಿದ್ದ 70 ಸಾವಿರ ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.