ಬಾಂಬ್‌ ತಯಾರಿ ಕುರಿತು ಪ್ರಚಾರಕನ ಹೇಳಿಕೆ: ಆರ್‌ಎಸ್‌ಎಸ್‌ಗೆ ಕಾಂಗ್ರೆಸ್ ತರಾಟೆ

Update: 2022-09-01 18:48 GMT

ಹೊಸದಿಲ್ಲಿ: ತಾನು ಬಾಂಬ್ ತಯಾರಿ ಶಿಬಿರದಲ್ಲಿ ಭಾಗವಹಿಸಿದ್ದೆ ಎಂದು ಆರ್‌ಎಸ್‌ಎಸ್ ಪ್ರಚಾರಕ (ಕಾರ್ಯಕರ್ತ) ಅಫಿಡಾವಿಟ್‌ನಲ್ಲಿ ಪ್ರತಿಪಾದಿಸಿದ ಬಳಿಕ ಕಾಂಗ್ರೆಸ್ ಗುರುವಾರ ಆರ್‌ಎಸ್‌ಎಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ.

ಆರ್‌ಎಸ್‌ಎಸ್ ಪ್ರಚಾರಕ ಯಶ್ವಂತ್ ಶಿಂದೆಯ ವೀಡಿಯೊವನ್ನು ಶೇರ್ ಮಾಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಆರ್‌ಎಸ್‌ಎಸ್‌ನ ದೇಶ ವಿರೋಧಿ ಚಟುವಟಿಕೆಗಳ ಕುರಿತು ಭಯಾನಕ ಮಾಹಿತಿಯನ್ನು ಅಫಿಡಾವಿಟ್ ಬಹಿರಂಗಗೊಳಿಸಿದೆ ಎಂದಿದ್ದಾರೆ.

ಇಡೀ ದೇಶದ ಮೇಲೆ ಬಾಂಬ್ ಹಾಕಲು ಹೇಗೆ ಸಂಚು ರೂಪಿಸಲಾಯಿತು, ಇದರಲ್ಲಿ ಭಾಗಿಯಾದವರು ಯಾರು ಎಂಬ ಮಾಹಿತಿಯನ್ನು ಈ ಅಫಿಡಾವಿಟ್ ಬಯಲುಗೊಳಿಸಿದೆ ಎಂದು ಅವರು ಪವನ್ ಖೇರಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News