ಜೈಲಿನಲ್ಲಿರುವ ಸಂಜಯ್ ರಾವುತ್ ಭೇಟಿಯಾಗಲು ಉದ್ಧವ್ ಠಾಕ್ರೆಗೆ ಅನುಮತಿ ನಿರಾಕರಣೆ

Update: 2022-09-07 17:32 GMT

ಮುಂಬೈ, ಸೆ. 7: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ಅರ್ಥರ್ ರೋಡ್ ಜೈಲಿನಲ್ಲಿರುವ ಶಿವಸೇನೆಯ ಸಂಸದ ಸಂಜಯ್ ರಾವುತ್ ಅವರನ್ನು ಭೇಟಿಯಾಗಲು ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆಗೆ  ಅನುಮತಿ ನಿರಾಕರಿಸಲಾಗಿದೆ.

ಜೈಲರ್ ಕೊಠಡಿಯಲ್ಲಿ ಸಂಜಯ್ ರಾವುತ್ ಅವರನ್ನು ಭೇಟಿಯಾಗಲು ಅನುಮತಿ ನೀಡುವಂತೆ ಉದ್ಧವ್ ಠಾಕ್ರೆ ಅರ್ಥರ್ ರೋಡ್ ಜೈಲಿನ ಅಧಿಕಾರಿಗೆ ಮನವಿ ಮಾಡಿದ್ದರು. ಆದರೆ, ಜೈಲಿನ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಸಂಜಯ್ ರಾವುತ್ ಅವರನ್ನು ಭೇಟಿಯಾಗಲು ಉದ್ಧವ್ ಠಾಕ್ರೆ ಅವರು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿಲ್ಲ. ಆದುದರಿಂದ ಜೈಲರ್‌ನ ಕೊಠಡಿಯಲ್ಲಿ ಭೇಟಿ ಸಾಧ್ಯವೇ ಇಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯ ಕೈದಿಗಳು ಜಾಲರಿಯ ಬದಿಯಲ್ಲಿ ಭೇಟಿಯಾಗುವ ರೀತಿಯಲ್ಲಿ ಅವರು ಕೂಡ ಭೇಟಿಯಾಗಬೇಕಾಗುತ್ತದೆ. ಅಲ್ಲದೆ, ಅದಕ್ಕೂ ನ್ಯಾಯಾಲಯದ ಅನುಮತಿ ಅಗತ್ಯ ಇದೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News