ಮಂಜೇಶ್ವರ: ಬೆಳಗಾವಿ ಮೂಲದ ಕಾರ್ಮಿಕನ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆ

Update: 2022-09-09 16:58 GMT

ಕಾಸರಗೋಡು : ಬೆಳಗಾವಿ ಮೂಲದ ಕಾರ್ಮಿಕರೋರ್ವರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾದ ಘಟನೆ ಮಂಜೇಶ್ವರ ಸಮೀಪದ ಪಾವೂರಿ ನಲ್ಲಿ ನಡೆದಿದೆ.

ಬೆಳಗಾವಿಯ ಬಸಪ್ಪ (63) ಮೃತಪಟ್ಟವರು.

ಪಾವೂರು ರಸ್ತೆ ಬದಿಯಲ್ಲಿ ಮುಂಜಾನೆ ಪರಿಸರವಾಸಿಗಳ ಗಮನಕ್ಕೆ ಬಂದಿದ್ದು, ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಎರಡು ದಿನಗಳ ಹಿಂದೆ ನಗರದ ವ್ಯಕ್ತಿಯೋರ್ವರು ತೋಟದ ಕೆಲಸಕ್ಕೆಂದು ಮಂಗಳೂರಿನಿಂದ ಕರೆದು ಕೊಂಡು ಬಂದಿದ್ದರು.

ಕೆಲಸ ಮುಗಿಸಿ ತೋಟದ ಮನೆಯ ಜಗಲಿಯಲ್ಲಿ ಮಲಗುತ್ತಿದ್ದರು. ಶುಕ್ರವಾರ ಮುಂಜಾನೆ ಮನೆಯಿಂದ 150 ಮೀಟರ್ ದೂರದ ರಸ್ತೆ ಬದಿ ಮೃತದೇಹ ಪತ್ತೆಯಾಗಿದೆ. ದೇಹದಲ್ಲಿ ಗಾಯಗಳು ಕಂಡು ಬಂದಿದ್ದು,  ರಕ್ತ ಹೆಪ್ಪು ಗಟ್ಟಿದ ಸ್ಥಿತಿಯಲ್ಲಿ  ಕಂಡುಬಂದಿದೆ. ಸಮೀಪ ಹುಲ್ಲು ಕಡಿಯುವ ಕತ್ತಿ  ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News