ಹಿರ್ಗಾನ: ಬಸ್ ಢಿಕ್ಕಿ; ಪಿಕಪ್ ಚಾಲಕ ಮೃತ್ಯು
Update: 2022-09-13 17:08 GMT
ಕಾರ್ಕಳ, ಸೆ.13: ತಾಲೂಕಿನ ಹಿರ್ಗಾನ ಗ್ರಾಮದ ದುಂಗಂಟ್ರಾಯ ಕ್ರಾಸ್ ಬಳಿ ಸೋಮವಾರ ರಾತ್ರಿ ಸಂಭವಿಸಿದ ಖಾಸಗಿ ಬಸ್ ಹಾಗೂ ಪಿಕಪ್ ವಾಹನ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ಪಿಕಪ್ ಚಾಲಕ ಸಂತೋಷ್ ನಾಯ್ಕ್ ಎಂಬವರು ಮೃತಪಟ್ಟಿದ್ದಾರೆ.
ಹಿರ್ಗಾನ ಕಡೆಯಿಂದ ಕಾರ್ಕಳದತ್ತ ವೇಗವಾಗಿ ತೆರಳುತಿದ್ದ ದುರ್ಗಾಂಬಾ ಬಸ್, ಹಿರ್ಗಾನ ರಾಜ್ಯ ಹೆದ್ದಾರಿ ತಿರುವಿನ್ಲಿ ಎದುರುಗಡೆಯಿಂದ ಬರುತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ವಾಹನದಿಂದ ಹೊರಗೆ ಎಸೆಯಲ್ಪಟ್ಟು ಪೊದೆಯಲ್ಲಿ ಬಿದ್ದ ಸಂತೋಷ ನಾಯ್ಕ್ ಎದೆ ಹಾಗೂ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಅಪಘಾತದ ಬಳಿಕ ಪಿಕಪ್ ವಾಹನ ರಸ್ತೆಯಲ್ಲಿ ಜಾರಿಕೊಂಡು ಹೋಗಿ ಕಾರ್ಕಳ ಕಡೆಯಿಂದ ಬರುತಿದ್ದ ಉದಯ ಶೆಟ್ಟಿ ಎಂಬವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ಉದಯ ಶೆಟ್ಟಿ ಗಾಯಗೊಂಡಿದ್ದು ಆಸ್ಪತ್ರೆಯಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.