ಅನುಮತಿ ಇಲ್ಲದೆ ಯಾರೂ ರಾಜ್ಯದಲ್ಲಿ ಬಂದ್ಗೆ ಕರೆ ನೀಡುವಂತಿಲ್ಲ: ಕೇರಳ ಹೈಕೋರ್ಟ್
Update: 2022-09-23 07:11 GMT
ಕೊಚ್ಚಿ: ಪಿಎಫ್ ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆ ನೀಡಿದ 12 ಗಂಟೆಗಳ ರಾಜ್ಯವ್ಯಾಪಿ ಬಂದ್ ಕರೆಗೆ ಸಂಬಂಧಿಸಿ ಕೇರಳ ಹೈಕೋರ್ಟ್ ಶುಕ್ರವಾರ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ್ದು "ಅನುಮತಿ ಇಲ್ಲದೆ ಯಾರೂ ರಾಜ್ಯದಲ್ಲಿ ಬಂದ್ಗೆ ಕರೆ ನೀಡುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಬಂದ್ ಕರೆಯನ್ನು ಬೆಂಬಲಿಸದ ನಾಗರಿಕರ ಖಾಸಗಿ ಆಸ್ತಿ ಹಾಗೂ ಸರಕಾರದ ಆಸ್ತಿಪಾಸ್ತಿಗಳಿಗೆ ಯಾವುದೇ ಹಾನಿ ಅಥವಾ ಧ್ವಂಸವನ್ನು ತಡೆಯಲು ರಾಜ್ಯ ಪೊಲೀಸರು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.
ಶುಕ್ರವಾರ, ಬಂದ್ ಆರಂಭವಾಗುತ್ತಿದ್ದಂತೆಯೇ ಸರಕಾರಿ ಬಸ್ಗಳ ಮೇಲೆ ಕಲ್ಲು ತೂರಾಟ ಮತ್ತು ದಾಳಿಯ ಘಟನೆಗಳು ವರದಿಯಾಗಿವೆ. ಆದಾಗ್ಯೂ, ಹಿಂಸಾಚಾರದ ಘಟನೆಗಳು ವಿರಳವಾಗಿವೆ. ಕೊಟ್ಟಾಯಂ ಮತ್ತು ಕೊಚ್ಚಿಯಲ್ಲಿ ಪಿಎಫ್ ಐ ಸದಸ್ಯರು ಮೆರವಣಿಗೆ ಮಾಡುವ ದೃಶ್ಯಗಳು ಕಂಡುಬಂದವು.