'ಆರೋಪಿಗಳನ್ನು ಗಲ್ಲಿಗೇರಿಸಿ' : ಹತ್ಯೆಗೀಡಾದ ಉತ್ತರಾಖಂಡದ ಯುವತಿಯ ತಂದೆ ಆಗ್ರಹ

Update: 2022-09-25 08:37 GMT
Photo:NDTV

ಶ್ರೀನಗರ(ಉತ್ತರಾಖಂಡ): ಆರೋಪಿಗಳನ್ನು ಗಲ್ಲಿಗೇರಿಸುವಂತೆ(accused men to be hanged)  ಹತ್ಯೆಗೀಡಾದ ಉತ್ತರಾಖಂಡ ಯುವತಿಯ ತಂದೆ (Father Of Murdered Uttarakhand Teen) ಆಗ್ರಹಿಸಿದ್ದಾರೆ. ಸಂಪೂರ್ಣ ಶವಪರೀಕ್ಷೆ ವರದಿ ತಮಗೆ ಲಭ್ಯವಾಗುವಂತೆ ಹಾಗೂ  ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಅವರು ಒತ್ತಾಯಿಸಿದರು.

NDTVಯೊಂದಿಗೆ ಮಾತನಾಡಿದ ಅವರು, ತಮ್ಮ 19 ವರ್ಷದ ಮಗಳು ಕಣ್ಮರೆಯಾದ ದಿನವೇ  ಸೆಪ್ಟೆಂಬರ್ 18 ರಂದು ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದರು.

ಶನಿವಾರ, ರಾಜ್ಯದ ಉನ್ನತ ಪೊಲೀಸ್ ಅಶೋಕ್ ಕುಮಾರ್ ಅವರ ಕರೆ ರೆಕಾರ್ಡಿಂಗ್ ಅನ್ನು ರಾಜ್ಯ ಪೊಲೀಸರು ಪೋಸ್ಟ್ ಮಾಡಿದ್ದಾರೆ.  ಅಲ್ಲಿ ಅವರು ಎಲ್ಲಾ ಆರೋಪಿಗಳನ್ನು ಗಲ್ಲಿಗೇರಿಸಲು ಪ್ರಯತ್ನಿಸುವುದಾಗಿ ಸಂತ್ರಸ್ತೆಯ ತಂದೆಗೆ ಭರವಸೆ ನೀಡಿದ್ದರು.

ನನ್ನ ಮಗ ಸೀದಾ ಸಾದಾ ಹುಡುಗ ಎಂದ ಮಾಜಿ ಬಿಜೆಪಿ ನಾಯಕ ವಿನೋದ್ ಆರ್ಯ

ಏತನ್ಮಧ್ಯೆ, ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ತಂದೆ, ಮಾಜಿ ಬಿಜೆಪಿ ನಾಯಕ ವಿನೋದ್ ಆರ್ಯ ಇಂದು ತನ್ನ ಮಗನನ್ನು ಸೀದಾ ಸಾದಾ ಹುಡುಗ ಎಂದು ಬಣ್ಣಿಸಿದ್ದಾರೆ ಮತ್ತು ಅವನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

"ವೋ ಸೀದಾ ಸದಾ ಬಾಲಕ್  ಹೈ (ಅವನು ಸರಳ ಹುಡುಗ) ಅವನು ತನ್ನ ಕೆಲಸದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾನೆ. ನನ್ನ ಮಗ ಪುಲ್ಕಿತ್ ಮತ್ತು ಕೊಲೆಯಾದ ಯುವತಿ ಇಬ್ಬರಿಗೂ ನಾನು ನ್ಯಾಯವನ್ನು ಬಯಸುತ್ತೇನೆ’’ ಎಂದು  ಆರ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News