ಬ್ಯಾಡ್ಮಿಂಟನ್: ವಿದ್ಯೋದಯ ಪಿಯು ಕಾಲೇಜು ರಾಜ್ಯಮಟ್ಟಕ್ಕೆ
Update: 2022-09-26 21:04 IST
ಉಡುಪಿ, ಸೆ.26: ಉಡುಪಿ ವಿದ್ಯೋದಯ ಟ್ರಸ್ಟ್ನ ಅಂಗ ಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸುವ ಮೂವಕ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದೆ.
ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧೆ ನಡೆದಿತ್ತು. ವಿದ್ಯೋದಯ ಪ.ಪೂ.ಕಾಲೇಜು ತಂಡದ ವಿದ್ಯಾರ್ಥಿಗಳಾದ ಭರತ್ ಮತ್ತು ಯಶವಂತ್ ಅಲ್ಲದೇ ಸುಮಿತ್ ಶೆಟ್ಟಿ, ಶ್ರೀಪಾದ, ಮಾಸುಮ್ ಇಕ್ಬಾಲ್ ಇವರನ್ನೊಳಗೊಂಡ ತಂಡ ಪಂದ್ಯಾಟದಲ್ಲಿ ಅಗ್ರಸ್ಥಾನಿಯಾಯಿತು.
ವಿಜಯಿ ತಂಡವನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.