ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣ ಮಾಡಿಯೇ ಸಿದ್ಧ: ಯಶ್ಪಾಲ್ ಸುವರ್ಣ

Update: 2022-09-28 11:10 GMT

ಉಡುಪಿ, ಸೆ.28: ಬ್ರಹ್ಮಗಿರಿ ಸರ್ಕಲ್‌ಗೆ ಆಸ್ಕರ್ ಫೆರ್ನಾಂಡಿಸ್ ಹೆಸರು ಇಡಬೇಕು ಹಾಗೂ ಪುತ್ಥಳಿ ನಿರ್ಮಿಸಬೇಕೆಂಬ ನಿರ್ಣಯವನ್ನು ಈಗಾಗಲೇ ಮಾಡಲಾಗಿದೆ. ಆ ನಿರ್ಣಯವನ್ನು ವಾಪಾಸ್ಸು ಪಡೆದು ಇವತ್ತಲ್ಲ ನಾಳೆ ಉಡುಪಿಯ ಅದೇ ಭಾಗದಲ್ಲಿ ಸಾವರ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡಿಯೇ ಸಿದ್ಧ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಉಡುಪಿಯ ಜನತೆ ದೇಶಭಕ್ತ ಸಾವರ್ಕರ್‌ಗೆ ಸಲ್ಲಿಸುವ ನಿಜವಾದ ಗೌರವ. ಸಾರ್ವಕರ್ ಪುತ್ಥಳಿ ನಿರ್ಮಾಣ ಮಾಡಲು ನಮಗೆ ಹೆಮ್ಮೆಯಾಗುತ್ತದೆ. ಸರಕಾರ, ನಗರಸಭೆ, ಶಾಸಕರ ಗಮನಕ್ಕೆ ತಂದು ಪುತ್ಥಳಿ ನಿರ್ಮಾಣ ಮಾಡ ಲಾಗುವುದು ಎಂದರು.

ನಗರಸಭೆ ತೆಗೆದುಕೊಂಡ ನಿರ್ಣಯವನ್ನು ವಾಪಾಸ್ಸು ಪಡೆಯಲು ಕಷ್ಟವಾಗು ತ್ತದೆ. ಆದರೂ ಕಾನೂನು ಬದ್ಧವಾಗಿ ಆ ನಿರ್ಣಯವನ್ನು ವಾಪಾಸ್ಸು ಪಡೆದು, ನಗರಸಭೆಗೆ ಇರುವ ಕಾನೂನು ಚೌಕಟ್ಟಿನಡಿಯಲ್ಲಿ ಪುತ್ಥಳಿ ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದ ಅವರು, ಆಸ್ಕರ್ ಫೆರ್ನಾಂಡಿಸ್ ಹೆಸರನ್ನು ಬಸ್ ನಿಲ್ದಾಣ, ಸರಕಾರಿ ಕಚೇರಿ ಸೇರಿದಂತೆ ಬೇರೆ ಸೂಕ್ತ ಪ್ರದೇಶಕ್ಕೆ ಇಡಬಹು ದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News