​ಮತಾಂಧರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುತ್ತೇವೆ: ಸಚಿವ ಸುನೀಲ್ ಕುಮಾರ್

Update: 2022-09-28 15:11 GMT

ಉಡುಪಿ, ಸೆ.28: ಮತಾಂಧತೆಯ ಅಮಲಿನಲ್ಲಿ ತೇಲುತ್ತಿರುವವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುತ್ತೇವೆ. ಮೋದಿ ಸರಕಾರ ಈ ಸಂದೇಶವನ್ನು ರವಾನಿಸಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಕಳೆದ ಹಲವಾರು ದಿನಗಳಿಂದ ಕೇಂದ್ರದ ತನಿಖಾ ದಳ ದಾಖಲೆಗಳನ್ನು ಸಂಗ್ರಹ ಮಾಡಿದೆ. ಪಿಎಫ್‌ಐಯನ್ನು ಖಂಡಿಸುವ ಒಂದೇ ಒಂದು ಹೇಳಿಕೆಯನ್ನು ಈವರೆಗೆ ಕಾಂಗ್ರೆಸ್ ನೀಡರಲಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ 18 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದ್ದರೂ ಕಾಂಗ್ರೆಸ್ ಖಂಡನೆ ಮಾಡಿರಲಿಲ್ಲ ಎಂದರು.

ಡಿಜೆ ಹಳ್ಳಿ ಕೆಜೆ ಹಳ್ಳಿ, ಹುಬ್ಬಳ್ಳಿ ಪೊಲೀಸ್ ಠಾಣೆಗೆ ನುಗ್ಗಿದ ಪ್ರಕರಣ, ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದ ಸಂದರ್ಭ ಕಾಂಗ್ರೆಸ್ ಮಾತನಾಡಿಲ್ಲ. ಕಾನೂನು ಕೈಗೆತ್ತಿಕೊಂಡ ಪಿಎಫ್‌ಐಯನ್ನು ಈವರೆಗೆ ಕಾಂಗ್ರೆಸ್ ಟೀಕಿಸಿಲ್ಲ. ಹಿಂಸೆ ಮತ್ತು ಸಮಾಜಘಾತುಕ ಶಕ್ತಿಗಳನ್ನು ಬಿಜೆಪಿ ಶಿಕ್ಷಿಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News