ಸಮಾಜಘಾತುಕ ಶಕ್ತಿಗಳನ್ನು ಮೊದಲು ನಿಷೇಧಿಸಿ: ಎಪಿಸಿಆರ್

Update: 2022-09-29 15:15 GMT

ಉಡುಪಿ, ಸೆ.29: ಸಮಾಜದಲ್ಲಿ ನಿರಂತರ ಭಯೋತ್ಪಾದನೆ, ಹಿಂಸೆಗೆ ಪ್ರಚೋದನೆ ಹಾಗೂ ಹಿಂಸೆ ಮಾಡಿ ದೇಶ ಹಾಗೂ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವ ಆರ್‌ಎಸ್‌ಎಸ್, ಬಜರಂಗದಳ, ಶ್ರೀರಾಮ ಸೇನೆ, ಹಿಂದೂ ಜಾಗರಣಾ ವೇದಿಕೆಯನ್ನು ಕೇಂದ್ರ ಸರಕಾರ ತಕ್ಷಣ ನಿಷೇಧಿಸಿ ಶಾಂತಿ ಸ್ಥಾಪಿಸುವ ಕೆಲಸ ಮಾಡಬೇಕು ಎಂದು ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಉಡುಪಿ ಜಿಲ್ಲಾ ಘಟಕ ಒತ್ತಾಯಿಸಿದೆ.

ಸರಕಾರಕ್ಕೆ ನಿಜವಾಗಿಯು ಸಮಾಜದಲ್ಲಿ ಶಾಂತಿ ನೆಲಸ ಬೇಕಾದಲ್ಲಿ  ಸಮಾಜಘಾತುಕ ಶಕ್ತಿಗಳಾದ ಆರ್‌ಎಸ್‌ಎಸ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಶ್ರೀರಾಮಸೇನೆ ಸಂಘಟನೆಗಳು ನಿಷೇಧ ಮಾಡಬೇಕು. ಕೇವಲ ಒಂದು ಸಮುದಾಯವನ್ನು ಗುರಿ ಮಾಡಿ ಸರಕಾರಿ ಸಂಸ್ಥೆಯನ್ನು  ದುರುಪಯೋಗ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸ ತಕ್ಷಣ ನಿಲ್ಲಿಸಬೇಕು ಎಂದು ಸಂಘಟನೆ ಪ್ರಮುಖರಾದ ಹುಸೇನ್ ಕೋಡಿಬೇಂಗ್ರೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News