ರಿಕ್ಷಾ ಢಿಕ್ಕಿ: ಬೈಕ್ ಸವಾರ ಮೃತ್ಯು

Update: 2022-10-07 16:35 GMT

ಶಿರ್ವಾ, ಅ.7: ಅಟೋರಿಕ್ಷಾವೊಂದು ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಗುರುವಾರ ಅಪರಾಹ್ನ ಶಿರ್ವಾ ಗ್ರಾಮದ ಬಂಟಕಲ್ಲಿನ ಶಿರ್ವ-ಕಟಪಾಡಿ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಬೈಕ್ ಸವಾರ ಶಂಕರ ಕೋಟ್ಯಾನ್ ಎಂದು ಗುರುತಿಸಲಾಗಿದೆ.

ಶಂಕರ್ ಕೋಟ್ಯಾನ್ ಅವರು ತನ್ನ ಬೈಕ್‌ನಲ್ಲಿ ಬಿ.ಸಿ.ರೋಡ್ ಕಡೆಯಿಂದ ಅರಸೀಕಟ್ಟೆ ಕಡೆ ಹೋಗುತಿದ್ದಾಗ ಅಪರಾಹ್ನ 1.40ರ ಸುಮಾರಿಗೆ ಮಾರ್ಟಿನ್ ಕಾಂಪ್ಲೆಕ್ಸ್ ಎದುರು ವೇಗವಾಗಿ ಬಂದ ಗುರುಪ್ರಸಾದ್ ಎಂಬವರು ಚಲಾಯಿಸುತಿದ್ದ ಅಟೋ ಡಿಕ್ಕಿ ಹೊಡೆದಿತ್ತು. ಇದರಿಂದ ಶಂಕರ ಕೋಟ್ಯಾನ್ ಬೈಕ್ ಸಮೇತ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಕೆಎಂಸಿಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಅಪರಾಹ್ನ 2.12ರ ಸುಮಾರಿಗೆ ಮೃತಪಟ್ಟರು. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News