ಉಡುಪಿ: ಅ.16ರಂದು ಮುಂಬೈ ವಾಪಸಿಗರ ಪ್ರಥಮ ಸಮ್ಮಿಲನ-2022
ಅಜೆಕಾರು/ಉಡುಪಿ, ಅ.11: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಉಡುಪಿಯ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಅ.16ರಂದು ಡಾ.ಎ.ಸುಬ್ಬಣ್ಣ ರೈ ಅವರ ಸರ್ವಾಧ್ಯಕ್ಷತೆಯಲ್ಲಿ ಪ್ರಪ್ರಥಮ ಮುಂಬೈ ವಾಪಸಿಗರ ಸಮ್ಮಿಲನ- 2022ನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಘಟಕ, ಹಿರಿಯ ಪತ್ರಕರ್ತ ಶೇಖರ ಅಜೆಕಾರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಮಂದಿ ಹಾಗೂ ಐದು ಸಂಸ್ಥೆಗಳನ್ನು ಗುರುತಿಸಿ ‘ತುಳುನಾಡ ರಜತ ಸಿರಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪೊವಾಯಿ ಕನ್ನಡ ಸೇವಾ ಸಂಘ ಮುಂಬೈ ಮತ್ತು ಉಡುಪಿ ಜಿಲ್ಲೆಯ ರಜತ ಸಂಭ್ರಮದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶೇಖರ್ ಅಜೆಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಲ್ಲೂರು ಶಿವರಾಮ ಶೆಟ್ಟಿ, ಎಂ.ಕೆ.ವಿಜಯಕುಮಾರ್ ಸಹಿತ ಗಣ್ಯರನ್ನು ತುಳುನಾಡ ರಜತ ಸಿರಿರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಾಗಿ ಆಯ್ಕೆಯಾದವರ ವಿವರ ಹೀಗಿದೆ.
ಸದಾಶಿವ ಭಂಡಾರಿ-ಅಧ್ಯಕ್ಷರು ಭಂಡಾರಿ ಮಹಾಮಂಡಲ ಸಕಲೇಶಪುರ, ನಿಸರ್ಗ ದಾಮೋದರ್-ಅಧ್ಯಕ್ಷರು ತುಳುಕೂಟ ಮಂಗಳೂರು, ನಾರಾಯಣ ಗವಾಳ್ಕರ್ ಎರ್ಲಪಾಡಿ-ತ್ರಿಭಾಷಾ ಮಹಾಕವಿಗಳು, ಇಂದ್ರಾಳಿ ಜಯಕರ ಶೆಟ್ಟಿ -ಅಧ್ಯಕ್ಷರು ತುಳುಕೂಟ ಉಡುಪಿ, ಫಾ.ವಲೇರಿಯನ್ ಫೆರ್ನಾಂಡಿಸ್- ಸಂಪಾದಕರು ರಾಕ್ಣೊ ಕೊಂಕಣಿ ಪತ್ರಿಕೆ, ರತ್ನಾವತಿ ಜೆ. ಬೈಕಾಡಿ ಮಂಗಳೂರು -ಅಧ್ಯಕ್ಷರು ಬೈಕಾಡಿ ಪ್ರತಿಷ್ಠಾನ, ಡಾ.ಎಸ್.ಎಸ್.ಪಾಟೀಲ್- ಸಂಪಾದಕರು ವಿಶ್ವದರ್ಶನ ಪತ್ರಿಕೆ, ಕಟಪಾಡಿ ಸುಧಾಕರ ಪುಜಾರಿ- ಮಾಜಿ ಅಧ್ಯಕ್ಷರು, ಕನ್ನಡ ಸೇವಾ ಸಂಘ.
ಜ್ಯೋತಿ ಬಿ ತಲ್ಲೂರು- ರಾಜ್ಯಾಧ್ಯಕ್ಷರು, ಕಾನೂನು ವಿಭಾಗ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್, ಎ.ನರಸಿಂಹ- ಅಧ್ಯಕ್ಷರು, ಪಂಚನಬೆಟ್ಟು ವಿದ್ಯಾವರ್ಧಕ ಸಂಘ ಹಿರಿಯಡ್ಕ, ಎಸ್.ಕೆ.ಸುಂದರ್-ಮುಂಬೈ ಸಮಾಜ ಸೇವಾಸಕ್ತರು, ಕೆ.ಎಂ.ಕೋಟ್ಯಾನ್-ಮುಂಬಯಿ ಸಮಾಜ ಸೇವಾಸಕ್ತರು, ಸಾವಿತ್ರಿ ಮನೋಹರ್-ಕಾರ್ಕಳ ಸಾಹಿತಿ ವಿಶ್ರಾಂತ ಮುಖ್ಯೋಪಾಧ್ಯಾಯಿನಿ, ಇಂದಿರಾ ಹಾಲಂಬಿ ಆತ್ರಾಡಿ- ಹಿರಿಯ ಪುಸ್ತಕ ಪ್ರಕಾಶಕಿ.
ಬದರಿ ಪುರೋಹಿತ್- ವ್ಯಂಗ್ಯ ಚಿತ್ರಕಾರ ಕೊಪ್ಪಳ, ಗಿರಿಧರ ಕಾರ್ಕಳ- ವಿಶ್ರಾಂತ ಬ್ಯಾಂಕ್ ಅಧಿಕಾರಿ ಬೆಂಗಳೂರು, ಸಂಧ್ಯಾ ಶೆಣೈ- ಹಾಸ್ಯ ಸಾಹಿತಿಗಳು ಉಡುಪಿ, ದಯಾಮಣಿ ಎಕ್ಕಾರು- ಭಾಗವತರು,ಸಾಹಿತಿ, ಅಣ್ಣಪ್ಪ ಪೂಜಾರಿ ದೆಂದೂರು- ಮಾಜಿ ಅಧ್ಯಕ್ಷರು ಪೂವಾಯಿ ಕನ್ನಡ ಸಂಘ, ಶಹನಾಜ್ ಎಂ.- ಸಂಪಾದಕಿ ಅನುಪಮ ಪತ್ರಿಕೆ, ಡಾ.ಮಧುಕೇಶ್ವರ ಜನಕ ಹೆಗಡೆ ಶಿರಸಿ- ಜೇನುಕೃಷಿ,ನಾಟಿ ವೈದ್ಯರು, ಜೆಪ್ಪು ಯೋಗಿಶ್ ಶೆಟ್ಟಿ- ಸ್ಥಾಪಕಾಧ್ಯಕ್ಷರು, ತುಳು ನಾಡ ರಕ್ಷಣಾ ರಕ್ಷಣಾ ವೇದಿಕೆ, ಭಾಸ್ಕರ ಮಣಿಪಾಲ- ರಂಗಕರ್ಮಿ/ ಸಿನಿಮಾ ನಟ, ಡಾ. ಉದಯ ಕುಮಾರ್ ಶೆಟ್ಟಿ ಆವರ್ಸೆ- ವಿಶ್ರಾಂತ ಪ್ರಾಂಶುಪಾಲರು, ನಾರಾಯಣ ಪ್ರಸಾದ್ ಕಾಸರಗೋಡು-ಸಂಪಾದಕರು, ಹೊರನಾಡ ಸಂಗಾತಿ.
ಸಂಸ್ಥೆಗಳು: ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ ಮಂಗಳೂರು, ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿ, ತುಳುನಾಡು ವಾರ್ತೆ ಸುದ್ದಿ ಪತ್ರಿಕೆ, ರೇಡಿಯೋ ಸಾರಂಗ್ ಮಂಗಳೂರು, ನ್ಯೂಸ್ ಕರ್ನಾಟಕ, ವೆಬ್ ಪತ್ರಿಕೆ.