×
Ad

ಉಡುಪಿ: ಅ.15ರಂದು ʼಗಾಂಧಿ ಕಥನ- ಒಂದು ಮುಖಾಮುಖಿʼ ಕಾರ್ಯಕ್ರಮ

Update: 2022-10-12 19:04 IST

ಉಡುಪಿ, ಅ.12: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು  ಆಶ್ರಯದಲ್ಲಿ ಅ.15ರ ಶನಿವಾರ ಸಂಜೆ 4.30ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ, ಡಿ.ಎಸ್.ನಾಗಭೂಷಣ ಅವರ ‘ಗಾಂಧಿ ಕಥನ - ಒಂದು ಮುಖಾಮುಖಿ’ ಕೃತಿಯ ಕುರಿತು ಕಾರ್ಯಕ್ರಮವೊಂದು  ಆಯೋಜಿತವಾಗಿದ್ದು, ಇದರಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ಇವರೊಂದಿಗೆ ಮುಖಾಮುಖಿ ನಡೆಯಲಿದೆ.

ಆಸಕ್ತರು ಭಾಗವಹಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News