ಉಡುಪಿ: ಅ.15ರಂದು ʼಗಾಂಧಿ ಕಥನ- ಒಂದು ಮುಖಾಮುಖಿʼ ಕಾರ್ಯಕ್ರಮ
Update: 2022-10-12 19:04 IST
ಉಡುಪಿ, ಅ.12: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಅ.15ರ ಶನಿವಾರ ಸಂಜೆ 4.30ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ, ಡಿ.ಎಸ್.ನಾಗಭೂಷಣ ಅವರ ‘ಗಾಂಧಿ ಕಥನ - ಒಂದು ಮುಖಾಮುಖಿ’ ಕೃತಿಯ ಕುರಿತು ಕಾರ್ಯಕ್ರಮವೊಂದು ಆಯೋಜಿತವಾಗಿದ್ದು, ಇದರಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ಇವರೊಂದಿಗೆ ಮುಖಾಮುಖಿ ನಡೆಯಲಿದೆ.
ಆಸಕ್ತರು ಭಾಗವಹಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.