ಉಡುಪಿ: ಇ-ಸ್ಯಾಂಡ್, ಮರಳುಮಿತ್ರ ಆ್ಯಪ್‌ಗಳ ಮೂಲಕ ಮರಳು ಲಭ್ಯ

Update: 2022-10-25 14:16 GMT
ಸಾಂದರ್ಭಿಕ ಚಿತ್ರ

ಉಡುಪಿ, ಅ.25: ಜಿಲ್ಲಾ ವ್ಯಾಪ್ತಿಯ ವಿವಿದೆಡೆಗಳಲ್ಲಿ ಲಭ್ಯವಿರುವ ಮರಳು ಸಾರ್ವಜನಿಕರಿಗೆ, ಖಾಸಗಿಯವರಿಗೆ ಹಾಗೂ ಸರಕಾರಿ ಕಾಮಗಾರಿಗಳಿಗೆ ಲಭ್ಯವಿದ್ದು, ಇವುಗಳನ್ನು ಇ-ಸ್ಯಾಂಡ್ ಆ್ಯಪ್ ಹಾಗೂ ಕರ್ನಾಟಕ ಸರಕಾರದ ಮರಳು ಮಿತ್ರ ಆ್ಯಪ್‌ಗಳ ಮೂಲಕ ಅ.27ರಿಂದ ಪಡೆದುಕೊಳ್ಳಬಹುದು ಎಂದು ಜಿಲ್ಲೆಯ ಹಿರಿಯ ಭೂವಿಜ್ಞಾನಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕು ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಮರಳು ಬ್ಲಾಕ್ ಸಂಖ್ಯೆ 4, ಹಳ್ನಾಡು, ಜಪ್ತಿ ಗ್ರಾಮದ ಮರಳು ಬ್ಲಾಕ್ ಸಂಖ್ಯೆ 6ರಲ್ಲಿರುವ ಮರಳು ಸ್ಟಾಕ್‌ಯಾರ್ಡ್‌ನಲ್ಲಿ ಲಭ್ಯವಿರುವ ಮರಳನ್ನು ಸಾರ್ವಜನಿ ಕರು, ಖಾಸಗಿಯವರು,ಸರಕಾರಿ ಕಾಮಗಾರಿಗಳಿಗೆ ಉಡುಪಿ ಇ-ಸ್ಯಾಂಡ್ ಆ್ಯಪ್ ಮೂಲಕ ಪಡೆದುಕೊಳ್ಳಬಹುದು.

ಅದೇ ರೀತಿ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಮಂಗಳೂರು ಇವರಿಗೆ ಸರಕಾರಿ ಕಾಮಗಾರಿಗೆ ಮೀಸಲಿರಿಸಿರುವ ಅಂಪಾರು ಗ್ರಾಮದ ಮರಳು ಬ್ಲಾಕ್ ಸಂಖ್ಯೆ 11ರಲ್ಲಿ ಸರಕಾರಿ ಕಾಮಗಾರಿಗಾಗಿ ಹಾಗೂ ಕೆ.ಎಸ್.ಎಂ.ಸಿ.ಎಲ್, ಬೆಂಗಳೂರು ಇವರಿಗೆ  ಬೈಂದೂರು ಮತ್ತು ಕುಂದಾಪುರ ತಾಲೂಕಿನ ಸೇನಾಪುರ, ಹೊಸಾಡು ಹಕ್ಲಾಡಿ, ಹೆಮ್ಮಾಡಿ, ಕಟ್‌ಬೆಲ್ತೂರು ಗ್ರಾಮದಲ್ಲಿ ಅಣೆಕಟ್ಟಿನ ಹಿನ್ನೀರಿನ ನದಿ ಪಾತ್ರದ ವ್ಯಾಪ್ತಿಯ ಹೂಳಿನಲ್ಲಿ ದೊರಕುವ ಮರಳನ್ನು ತೆಗೆಯಲು ಕಾರ್ಯಾದೇಶ ನೀಡಿರುವ ಮರಳು ಬ್ಲಾಕ್‌ನಲ್ಲಿ ಕೆ.ಎಸ್.ಎಂ.ಸಿ.ಎಲ್, ಬೆಂಗಳೂರು ಇವರಿಗೆ ಒದಗಿಸಿರುವ ಕರ್ನಾಟಕ ಸರ್ಕಾರದ ಮರಳು ಮಿತ್ರ ಆ್ಯಪ್ ಮೂಲಕ ಅ.27 ರಿಂದ ಸಾರ್ವಜನಿಕರು ಹಾಗೂ ಸರಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಲಭ್ಯವಿರುತ್ತದೆ.

ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು ಆಯಾ ಮರಳು ಬ್ಲಾಕ್‌ಗಳಿಗೆ ಸಂಬಂಧಿಸಿದ ಸ್ಟಾಕ್‌ ಯಾರ್ಡ್‌ ನಿಂದ ಉಡುಪಿ ಇ-ಸ್ಯಾಂಡ್ ಆ್ಯಪ್ ಮತ್ತು ಕರ್ನಾಟಕ ಸರಕಾರದ ಮರಳುಮಿತ್ರ ಆ್ಯಪ್ ಮೂಲಕ  ಪಡೆದುಕೊಳ್ಳಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಗಳ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ, ಮರಳು ಮಿತ್ರ ದೂರವಾಣಿ ಸಂಖ್ಯೆ:8028055000, ಉಡುಪಿ ಇ-ಸ್ಯಾಂಡ್ ಆ್ಯಪ್ ದೂರವಾಣಿ ಸಂಖ್ಯೆ: 6366248666, 6366743888 ಹಾಗೂ 6366871888 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News