ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2022-10-29 13:26 GMT

ಶಂಕರನಾರಾಯಣ, ಅ.29: ವಿಪರೀತ ಮದ್ಯ ಸೇವನೆ  ಚಟ ಹೊಂದಿದ್ದ ಮಡಾಮಕ್ಕಿ ಮಾಂಡಿ ಮೂರುಕೈ ನಿವಾಸಿ ರಾಜೀವ ಹೆಗ್ಡೆ (66) ಎಂಬವರು ಜೀವನದಲ್ಲಿ  ಜಿಗುಪ್ಸೆಗೊಂಡು  ಅ.28ರಂದು ರಾತ್ರಿ ಸಿದ್ದಾಪುರ ಮಾರ್ಕೇಟ್ ಒಳಗಡೆ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ವೈಯಕ್ತಿಕ ವಿಚಾರದಲ್ಲಿ ಮನನೊಂದ ಕೋಟತಟ್ಟು ಪಡುಕೆರೆಮೃತ ಸಂತೋಷ (38) ಎಂಬವರು ಅ.29ರಂದು ಬೆಳಗ್ಗೆ ಮನೆಯ ಬೆಡ್‌ರೂಮಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ಅ.೮ರಂದು ಮನೆಯಲ್ಲಿ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಪೆರಂಪಳ್ಳಿಯ ಜೋಕಿಮ್ ಡಿಸೋಜ(೬೧) ಎಂಬವರು ಅ.೨೮ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ  ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. 

Similar News