ಮಲ್ಪೆ ಬೀಚ್ನಿಂದ ಸೀವಾಕ್ವರೆಗಿನ ಕಡಲ ತೀರದ ಸ್ವಚ್ಛತೆ
ಮಲ್ಪೆ : ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ವತಿಯಿಂದ ಉಡುಪಿ ನಗರಸಭೆಯ ಸಹಕಾರದೊಂದಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಲ್ಪೆಬೀಚ್ನಿಂದ ಸೀ-ವಾಕ್ವರೆಗಿನ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕೊಡವೂರು ಶ್ರೀಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ಕಸ ತೆಗೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ನಗರಸಭಾ ಸದಸ್ಯರಾದ ವಿಜಯ ಕುಂದರ್ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮಲ್ಪೆಯ ಐದು ಭಜನಾ ಮಂದಿರಗಳಾದ ಶ್ರೀಹನುಮಾನ್ ವಿಠೋಬ ಭಜನಾ ಮಂದಿರ ಹನುಮಾನ್ ನಗರ, ಬಾಲಕರ ಶ್ರೀರಾಮ ಭಜನಾ ಮಂದಿರ ಕೊಳ, ಶ್ರೀಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ, ಶ್ರೀಜ್ಞಾನ ಜ್ಯೋತಿ ಭಜನಾ ಮಂದಿರ ಕಡಲತೀರ ಮಲ್ಪೆ, ಭಕ್ತಿ ಉದಯ ಶ್ರೀ ಪಂಡರಿನಾಥ ಭಜನಾ ಮಂದಿರ ವಡಭಾಂಡೇಶ್ವರ ಇದರ ಮಾತೃ ಮಂಡಳಿಯ ಸದಸ್ಯರು, ಮಲ್ಪೆಬೀಚ್ ಗುತ್ತಿಗೆದಾರ ಮಂತ್ರ ಟೂರಿಸಮ್ನ ಸುದೇಶ್ ಶೆಟ್ಟಿ ಮತ್ತು ತಂಡ, ಮಲ್ಪೆ ಬೀಚ್ ಪ್ರವಾಸಿ ಬೋಟ್, ಅಂಗಡಿ ವ್ಯಾಪಾರಸ್ಥರು, ಬೀಚ್ ವ್ಯಾಪಾರಸ್ಥರು ಭಾಗವಹಿಸಿದ್ದರು.