ಉತ್ತರ ಪ್ರದೇಶ: ಪೊಲೀಸ್ ಕಸ್ಟಡಿಯಲ್ಲಿ ವ್ಯಾಪಾರಿ ಸಾವು

Update: 2022-11-04 18:38 GMT

ಲಕ್ನೋ, ನ. 4: ಉತ್ತರಪ್ರದೇಶದ ಪ್ರಯಾಗ್ ರಾಜ್‌ನ ಪೊಲೀಸ್ ಕಸ್ಟಡಿಯಲ್ಲಿ ವ್ಯಾಪಾರಿಯೋರ್ವನ ಸಾವು ಸಂಭವಿಸಿದೆ.  ತನ್ನ ನೆರೆಯ ಮಹಿಳೆಯೊಂದಿಗೆ ಪಾರ್ಕಿಂಗ್‌ಗೆ ವಿವಾದಕ್ಕೆ ಸಂಬಂಧಿಸಿ ಸಂಗಮ್ ನಗರದ ದರಗಂಝ್ ಪ್ರದೇಶದ ನಿವಾಸಿ 35ರ ಹರೆಯದ ಲವಕೇಶ್ ಕುಮಾರ್ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದರು. 

ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಎಸ್‌ಪಿ, ಶರ್ಮಾ ಹಾಗೂ ಆತನ ನೆರೆಯ ಮಹಿಳೆಯ ನಡುವಿನ ಘರ್ಷಣೆ ಕುರಿತು ಪೊಲೀಸರು ಮಾಹಿತಿ ಸ್ವೀಕರಿಸಿದ್ದರು. ಇತರ ಪೊಲೀಸರೊಂದಿಗೆ ಎಸ್‌ಎಚ್‌ಒ ಸ್ಥಳಕ್ಕೆ ಧಾವಿಸಿ ಶರ್ಮಾನನ್ನು ವಶಕ್ಕೆ ತೆಗೆದುಕೊಂಡಿದ್ದರು. ಅನಂತರ ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದಿದ್ದಾರೆ. 

ಈ ನಡುವೆ ಪೊಲೀಸರು, ‘‘ಲವಕೇಶ್ ಶರ್ಮಾನನ್ನು ವೈದ್ಯಕೀಯ ಪರೀಕ್ಷೆಗೆ ಬೇಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಇದ್ದಕ್ಕಿದ್ದಂತ ಅಸ್ವಸ್ಥನಾದ. ಅನಂತರ ಮೃತಪಟ್ಟ’’ ಎಂದಿದ್ದಾರೆ. 
ಆದರೆ, ಲವಕೇಶ್ ಶರ್ಮಾ ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟಿದ್ದಾನೆ ಎಂದು ಆತನ ಸಹೋದರ ಆರೋಪಿಸಿದ್ದಾರೆ. 

Similar News